Agriculture and Rural Development
ಅವರ ಹೆಸರು ಜವಹರ್. ವಯಸ್ಸು ೧೯ ವರುಷ. ಬದುಕಿನ ಪರಮ ಗುರಿ ಪರಿಸರ ರಕ್ಷಣೆ. ಅದಕ್ಕಾಗಿ ಅವರು ಮಾಡಿದ ದಿಗ್ಭ್ರಮೆ ಹುಟ್ಟಿಸುವ ಕೆಲಸ: ಕಾಲುವೆಗೆ ಹಾರಿ ಬಲಿದಾನ. ಇದು ನಡೆದದ್ದು ತಮಿಳ್ನಾಡಿನ ತಂಜಾವೂರಿನಲ್ಲಿ, ಸಪ್ಟಂಬರ್ ೨೦೧೬ರಲ್ಲಿ.
ಜವಹರ್ ಬಿಟ್ಟುಹೋಗಿರುವ ಆತ್ಮಹತ್ಯಾ ಹೇಳಿಕೆಯ ವಿಡಿಯೋ ರೆಕಾರ್ಡಿಂಗಿನಲ್ಲಿರುವ ಮಾತು: “ನನ್ನ ಬಲಿದಾನ ಭಾರತದಲ್ಲಿ ಪ್ಲಾಸ್ಟಿಕಿನ ಬಳಕೆ ಬಗ್ಗೆ ಗಂಭೀರ ಚಿಂತನೆಯನ್ನು ಹುಟ್ಟು ಹಾಕುತ್ತದೆಂಬ ಆಶಯದಿಂದ ನನ್ನ ಪ್ರಾಣತ್ಯಾಗ ಮಾಡುತ್ತಿದ್ದೇನೆ. ಈ ನಿಟ್ಟಿನಲ್ಲಿ ನನ್ನ ಶಾಂತಿಯುತ ಪ್ರತಿಭಟನೆಗಳೆಲ್ಲವೂ ವ್ಯರ್ಥವಾದ ಕಾರಣ, ನನಗೆ ಆತ್ಮಹತ್ಯೆಯ ಆಯ್ಕೆ ಅನಿವಾರ್ಯವಾಯಿತು.”
ಪ್ಲಾಸ್ಟಿಕಿನ ಅವಾಂತರ ಇಷ್ಟು ತೀವ್ರವಾಗಿದೆಯೇ? ಒಮ್ಮೆ ನಿಮ್ಮ ಮನೆಯಲ್ಲಿ ಇರುವುದನ್ನೆಲ್ಲ ಗಮನಿಸಿ. ನೀವು ಖರೀದಿ ಮಾಡುವುದನ್ನೆಲ್ಲ ಪರಿಶೀಲಿಸಿ. ಎಲ್ಲದರಲ್ಲಿಯೂ ಪ್ಲಾಸ್ಟಿಕ್ ಆವರಿಸಿಕೊಂಡಿದೆ, ಅಲ್ಲವೇ? ಹೌದು, ಪ್ಲಾಸ್ಟಿಕ್ ನಮ್ಮ ಬದುಕನ್ನೇ ಆವರಿಸಿಕೊಂಡಿದೆ. ಅದು ಅಗ್ಗ, ಅದರ ಬಾಳಿಕೆ ದೀರ್ಘ, ಅದು ಭಾರೀ ಅನುಕೂಲ ಎಂಬ ಸಬೂಬುಗಳನ್ನು ಹೇಳುತ್ತಾ, ಮತ್ತೆಮತ್ತೆ ದಿನದಿನವೂ ಪ್ಲಾಸ್ಟಿಕನ್ನು ಮನೆಯೊಳಗೆ ತರುತ್ತಿದ್ದೇವೆ, ಅಲ್ಲವೇ? ಅದರಿಂದಾಗಿಯೇ, ೫೦ ವರುಷಗಳ ಮುಂಚೆ ಉತ್ಪಾದನೆ ಮಾಡುತ್ತಿದ್ದ ಪರಿಮಾಣಕ್ಕಿಂತ ೨೦ ಪಟ್ಟು ಅಧಿಕ ಪ್ಲಾಸ್ಟಿಕನ್ನು ಈಗ ಉತ್ಪಾದಿಸುತ್ತಿದ್ದೇವೆ! ಮುಂದಿನ ೨೦ ವರುಷಗಳಲ್ಲಿ ಪ್ಲಾಸ್ಟಿಕಿನ ಉತ್ಪಾದನೆ ಇಮ್ಮಡಿಯಾಗಲಿದೆ!
ಅಬ್ಬ, ಎಲ್ಲಿ ಕಂಡರಲ್ಲಿ ಪ್ಲಾಸ್ಟಿಕ್! ಕೆರೆಗಳಲ್ಲಿ, ನದಿಗಳ ಬದಿಗಳಲ್ಲಿ, ಸಮುದ್ರ ತೀರಗಳಲ್ಲಿ, ಉದ್ಯಾನಗಳಲ್ಲಿ, ಕಾಡುಗಳ ಅಂಚಿನಲ್ಲಿ, ಗುಡ್ಡಗಳಲ್ಲಿ, ಪರ್ವತಗಳಲ್ಲಿ, ರಸ್ತೆಗಳ ಇಬ್ಬದಿಗಳಲ್ಲಿ, ರೈಲುಹಳಿಗಳ ಇಕ್ಕಡೆಗಳಲ್ಲಿ, ಸಮುದ್ರಗಳ ತಳಗಳಲ್ಲಿ – ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಲೋಟಗಳು, ಚೀಲಗಳು, ಬಾಟಲಿಗಳು, ಕವರುಗಳು, ಬ್ಯಾಗುಗಳು, ಕನ್-ಟೈನರುಗಳು ತುಂಬಿಕೊಂಡಿವೆ. “ಪ್ರಾಕೃತಿಕ ಪರಿಸರವನ್ನು ಶಾಶ್ವತವಾಗಿ ಮಾಲಿನ್ಯ ಮಾಡುವ” ಪ್ಲಾಸ್ಟಿಕಿನ ಅಪಾಯ ನಿಜವಾಗುತ್ತಿದೆ ಎನ್ನುತ್ತದೆ ಪ್ಲಾಸ್ಟಿಕಿನ ಬಗ್ಗೆ ೨೦೧೭ರಲ್ಲಿ ಪ್ರಕಟವಾಗಿರುವ ಜಾಗತಿಕ ವರದಿ.
ನಮ್ಮ ದೇಶದ ಎಲ್ಲೆಡೆಯಲ್ಲಿ ರೈತರ ಆಕ್ರೋಶ ಮುಗಿಲು ಮುಟ್ಟಿದೆ. ಸರಕಾರದ ನಿರ್ಲಕ್ಷ್ಯದಿಂದಾಗಿ ಕಳೆದ ಇಪ್ಪತ್ತು ವರುಷಗಳಲ್ಲಿ ಮೂರು ಲಕ್ಷಕ್ಕಿಂತ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿರುವುದೇ ಅವರ ಆಕ್ರೋಶಕ್ಕೆ ಕಾರಣ.
ಕೃಷಿರಂಗದ ಬಿಕ್ಕಟ್ಟಿಗೆ ಕಾರಣಗಳು ಹಲವು. ಪ್ರಧಾನ ಕಾರಣ, ಒಳಸುರಿಗಳ (ಬೀಜ, ಗೊಬ್ಬರ, ಕೆಲಸದಾಳುಗಳ ಮಜೂರಿ, ಕೃಷಿಯಂತ್ರಗಳು) ವೆಚ್ಚ ಏರುತ್ತಿದ್ದರೂ ಕೃಷಿ ಉತ್ಪನ್ನಗಳ ಬೆಲೆ ಒಂದೇ ಮಟ್ಟದಲ್ಲಿದೆ; ಹಾಗಾಗಿ, ರೈತರ ಸಾಲದ ಹೊರೆ ಜೀವಭಾರವಾಗುವಷ್ಟು ಹೆಚ್ಚುತ್ತಿದೆ. ಈ ಪರಿಸ್ಥಿತಿಯಲ್ಲಿ, ಕೆಲವು ರಾಜ್ಯಗಳು ತಾವು ರೈತರ ಪರ ಎಂದು ತೋರಿಸಿಕೊಳ್ಳಲಿಕ್ಕಾಗಿ, ಹಲವಾರು ಷರತ್ತುಗಳೊಂದಿಗೆ, ಸಾಲಮನ್ನಾದ ಯೋಜನೆ ಜ್ಯಾರಿ ಮಾಡಿವೆ.
ಇಂತಹ ಸಮಯಕ್ಕಾಗಿ ಕಾದಿರುವ ಕೆಲವು ಕೃಷಿ ಪರಿಣತರು “ಕೃಷಿರಂಗದ ಬಿಕ್ಕಟ್ಟಿಗೆ ಕಾರಣಗಳೇನು?” ಎಂದು ವಿಶ್ಲೇಷಣೆಗೆ ತೊಡಗಿದ್ದಾರೆ. ಅವರು ನೀಡುವ ಕಾರಣಗಳು ಹೀಗಿವೆ: ಹಿಡುವಳಿಗಳ ವಿಭಜನೆ, ಜಾಗತೀಕರಣದ ಬೆನ್ನೇರಿ ಬಂದ ಹೊಸ ಆರ್ಥಿಕ ನೀತಿಗಳಿಂದಾಗಿ ಮಾರುಕಟ್ಟೆಯಲ್ಲಿ ಏರಿಳಿತ, ರೈತರ ಜಮೀನುಗಳಿಗೆ ನೀರಾವರಿಯ ಕೊರತೆ, ಉಗ್ರಾಣಗಳ ಕೊರತೆ, ಕೃಷಿಯ ಒಳಸುರಿಗಳ ಬೆಲೆಯೇರಿಕೆ, ಕಣ್ಣುಮುಚ್ಚಾಲೆಯಾಡುವ ಮಳೆ.
ಇವುಗಳಲ್ಲಿ ಪ್ರತಿಯೊಂದು ಕಾರಣವೂ ಕೃಷಿರಂಗದ ಬಿಕ್ಕಟ್ಟಿನ ಒಂದು ಮಗ್ಗುಲಿನ ಸಮಸ್ಯೆಗಳನ್ನು ಎತ್ತಿ ತೋರಿಸುತ್ತದೆ. ಆದರೆ ಈ ಬಿಕ್ಕಟ್ಟಿನ ಮೂಲ ಕಾರಣ ಬೇರೆಯೇ ಆಗಿದೆ. ನಾವೆಲ್ಲ ಶಾಲೆಗಳಲ್ಲಿ, ಹೈಸ್ಕೂಲುಗಳಲ್ಲಿ ಕಲಿಯುತ್ತಿದ್ದಾಗ “ಹಸುರು ಕ್ರಾಂತಿ”ಯನ್ನು ಹಾಡಿ ಹೊಗಳಿದ್ದೇ ಹೊಗಳಿದ್ದು. ಅದು ಆಹಾರದ ಕೊರತೆಯಿಂದ ನಮ್ಮ ದೇಶವನ್ನು ಪಾರು ಮಾಡಿತೆಂದು ಮತ್ತೆಮತ್ತೆ ಬೋಧನೆ. ಈ ಹೊಸವಿಧಾನದ ಕೃಷಿಗೆ ಆಧಿಕ ಇಳುವರಿ ತಳಿಗಳು, ರಾಸಾಯನಿಕ ಗೊಬ್ಬರಗಳು ಹಾಗೂ ವಿಷಭರಿತ ಪೀಡೆನಾಶಕಗಳೇ ಅಡಿಪಾಯವೆಂದು ವಿವರಿಸಲಾಗಿತ್ತು.
ನಮ್ಮ ದೇಶದ ರೈತರ ಸಂಕಟಗಳಿಗೆ ಕೊನೆಯೇ ಇಲ್ಲ. ಈ ವರುಷವೂ ಸಾಧಾರಣ ಮಳೆಯಾಗಲಿದೆ ಎಂಬ ಮುನ್ಸೂಚನೆಯಿಂದ ನಮ್ಮ ರೈತರಿಗೆ ಸಂತೋಷವಾಗಿಲ್ಲ. ಸಂತೋಷದ ಮಾತಂತಿರಲಿ, ಅವರು ಬೀದಿಗಿಳಿದಿದ್ದಾರೆ - ಸರಕಾರ ತನ್ನ ಧೋರಣೆ ಬದಲಾಯಿಸಬೇಕು ಎಂಬುದವರ ಬೇಡಿಕೆ. ಹನ್ನೆರಡು ರಾಜ್ಯಗಳಲ್ಲಿ ಕಳೆದ ಎಂಟು ತಿಂಗಳಿನಿಂದ (ಅಂದರೆ ಎರಡು ಹಂಗಾಮು) ರೈತರ ಪ್ರತಿಭಟನೆ ಭುಗಿಲೆದ್ದಿದೆ. ೬ ಜೂನ್ ೨೦೧೭ರಂದು ಮಧ್ಯಪ್ರದೇಶದ ಭೋಪಾಲದಲ್ಲಿ ಪೊಲೀಸರ ಗುಂಡೇಟಿಗೆ ಆರು ರೈತರು ಬಲಿಯಾದ ಕ್ಷಣದಿಂದ ರೈತರ ಪ್ರತಿಭಟನೆ ಹಿಂಸಾ ರೂಪ ತಾಳಿದೆ.
ವಾಸ್ತವವಾಗಿ, ಈ ಹೊತ್ತಿನಲ್ಲಿ ನಮ್ಮ ರೈತರು ಮತ್ತು ಸರಕಾರ ಸಂಭ್ರಮಾಚರಣೆ ಮಾಡಬೇಕಾಗಿತ್ತು. ಯಾಕೆನ್ನುತ್ತೀರಾ? ಈ ಎರಡು ಮಹಾ ಸಾಧನೆಗಳಿಗಾಗಿ: ೨೦೧೬-೧೭ನೇ ವರುಷದಲ್ಲಿ ಆಹಾರ ಧಾನ್ಯಗಳ ದಾಖಲೆ ಉತ್ಪಾದನೆಗಾಗಿ ಮತ್ತು ಭಾರತವು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಲು ಕಾರಣವಾದ “ಹಸುರುಕ್ರಾಂತಿ" ೫೦ ವರುಷಗಳನ್ನು ಪೂರೈಸಿದ್ದಕ್ಕಾಗಿ. ಆದರೆ ಆದದ್ದೇನು? ಫಸಲಿಗೆ ಚರಿತ್ರೆಯಲ್ಲೇ ಅತ್ಯಂತ ಕಡಿಮೆ ಬೆಲೆ ಸಿಕ್ಕಿದ್ದನ್ನು ಪ್ರತಿಭಟಿಸಲಿಕ್ಕಾಗಿ ಆಲೂಗಡ್ಡೆ, ಟೊಮೆಟೊ, ಹಾಲು ಮತ್ತು ಇತರ ಕೃಷಿಉತ್ಪನ್ನಗಳನ್ನು ರೈತರು ರಸ್ತೆಗೆ ಚೆಲ್ಲಿದರು. ಎದ್ದು ಕಾಣುವ ಉದಾಹರಣೆ ಈರುಳ್ಳಿ. ಇದರ ಬೆಲೆ ಏರಿದಾಗೆಲ್ಲ ರಾಜಕೀಯ ಸುಂಟರಗಾಳಿ ಎದ್ದಿದೆ. ಇದೀಗ, ಮೊದಲ ಬಾರಿ ರೈತರು ಮತ್ತು ರಾಜಕಾರಣಿಗಳು - ಇಬ್ಬರೂ ಕುಸಿಯುತ್ತಿರುವ ಈರುಳ್ಳಿ ಬೆಲೆ ಬಗ್ಗೆ ಚಿಂತೆ ಮಾಡುತ್ತಿದ್ದಾರೆ. ಇದು ಏನನ್ನು ಸೂಚಿಸುತ್ತದೆ? ಕೃಷಿರಂಗದಲ್ಲಿ ಏನೋ ಗಂಭೀರ ತಪ್ಪಾಗಿದೆ ಮತ್ತು ಅದನ್ನು ನಾವು ಅಸಡ್ಡೆ ಮಾಡುತ್ತಿದ್ದೇವೆ ಎಂಬುದನ್ನು.
ಒಂದು ಕಿಲೋಕ್ಕೆ ರೂಪಾಯಿ ೧.೧೦ ಲಕ್ಷ ಬೆಲೆಯ ಚಹಾ ಬಗ್ಗೆ ಕೇಳಿದ್ದೀರಾ? ಅದುವೇ ಜಗತ್ತಿನ ಅತ್ಯಂತ ದುಬಾರಿ ಚಹಾ. ಅದರ ತವರು ಡಾರ್ಜಿಲಿಂಗಿನ ಮಕೈಬಾರಿ ಟೀ ಎಸ್ಟೇಟ್.
೧೮೫೯ರಲ್ಲಿ ಗಿರೀಶ್ ಚಂದ್ರ ಬ್ಯಾನರ್ಜಿ ಆರಂಭಿಸಿದ ಈ ಎಸ್ಟೇಟಿಗೆ ೧೫೮ ವರುಷಗಳ ದೀರ್ಘ ಇತಿಹಾಸ. ೧,೬೫೦ ಎಕ್ರೆ ವಿಸ್ತಾರದ ಮಕೈಬಾರಿ ಟೀ ಎಸ್ಟೇಟಿನಲ್ಲಿ ಸುತ್ತಾಡುವಾಗ ಅಲ್ಲಿ ಮೂರನೆಯ ಎರಡು ಭಾಗ ಪ್ರದೇಶದಲ್ಲಿ (೧,೧೦೦ ಎಕ್ರೆ) ಅರಣ್ಯವೇ ಕಾಣಿಸುತ್ತದೆ. ಉಳಿದ ಮೂರನೆಯ ಒಂದು ಭಾಗ ಪ್ರದೇಶದಲ್ಲಿ (೫೫೦ ಎಕ್ರೆ) ಮಾತ್ರ, ಅರಣ್ಯದ ನಡುನಡುವೆ ಚಹಾ ಗಿಡಗಳ ಉದ್ಯಾನಗಳಿವೆ. ಇಲ್ಲಿ ಅತ್ಯುತ್ತಮ ಗುಣಮಟ್ಟದ ಟೀ ಉತ್ಪಾದನೆಯಾಗಲು ಇದುವೇ ಪ್ರಧಾನ ಕಾರಣ, ಎನ್ನುತ್ತಾರೆ ಮಕೈಬಾರಿ ಟೀ ಎಸ್ಟೇಟಿನ ಮಾಲೀಕ ರಾಜಾ ಬ್ಯಾನರ್ಜಿ (೭೦).
೧೯೬೦ ಮತ್ತು ೧೯೭೦ರ ದಶಕಗಳಲ್ಲಿ, ಈ ಎಸ್ಟೇಟಿನಲ್ಲಿ ನೂರಾರು ಎಕ್ರೆ ಕಾಡು ನಾಶ ಮಾಡಲಾಯಿತು. ಅದರ ದುಷ್ಪರಿಣಾಮಗಳು ಕೆಲವೇ ವರುಷಗಳಲ್ಲಿ ಕಂಡು ಬಂದವು. ಭಾರೀ ಭೂಕುಸಿತದಿಂದಾಗಿ, ವ್ಯಾಪಕ ಪ್ರದೇಶದಲ್ಲಿ ಚಹಾ ಉದ್ಯಾನಗಳು ನಾಶವಾದವು. ಅದಲ್ಲದೆ, ರಾಸಾಯನಿಕ ಪೀಡೆನಾಶಕಗಳ ಅಧಿಕ ಬಳಕೆಯಿಂದಾಗಿ ಅಲ್ಲಿನ ಮಣ್ಣು ವಿಷಮಯವಾಯಿತು. “ಇದರಿಂದ ನಾವು ಪಾಠ ಕಲಿತು, ಕಾಡು ಬೆಳೆಸುವ ದೊಡ್ಡ ಕಾರ್ಯಕ್ರಮ ಕೈಗೆತ್ತಿಕೊಂಡೆವು” ಎಂದು ವಿವರಿಸುತ್ತಾರೆ ರಾಜಾ ಬ್ಯಾನರ್ಜಿ.
ಜೊತೆಗೆ, ಅಲ್ಲಿ ಬಯೋಡೈನಮಿಕ್ ಕೃಷಿ ಎಂಬ ಸಾವಯವ ಪದ್ಧತಿಯಲ್ಲಿ ಚಹಾ ಗಿಡಗಳ ಕೃಷಿ ಮಾಡುತ್ತಿರುವುದೂ ಅಲ್ಲಿನ ಚಹಾದ ಗುಣಮಟ್ಟ ವೃದ್ಧಿಗೆ ಪೂರಕ. ಡಾರ್ಜಿಲಿಂಗಿನಲ್ಲಿ ಚಹಾದ ಸಾವಯವ ಕೃಷಿ ಆರಂಭಿಸಿದ ಮೊದಲನೆಯ ಎಸ್ಟೇಟ್ ಮಕೈಬಾರಿ. “ನಾವು ಕಾಡು ಬೆಳೆಸುವ ಮತ್ತು ಸಾವಯವ ಕೃಷಿಯ ಕ್ರಮಗಳನ್ನು ಜ್ಯಾರಿ ಮಾಡಿದ್ದರಿಂದಾಗಿ ನಮ್ಮ ಟೀ ಎಸ್ಟೇಟ್ ಉಳಿಯಿತು. ಜೊತೆಗೆ, ಜಗತ್ತಿನ ಎಲ್ಲ ಪ್ರದೇಶಗಳ ಚಹಾಪ್ರೇಮಿಗಳಿಗೆ ನಮ್ಮ ಉತ್ಪನ್ನಗಳು ಇಷ್ಟವಾದವು. ಡಾರ್ಜಿಲಿಂಗಿನ ಇತರ ಟೀ ಎಸ್ಟೇಟಿನವರು ಇದೇ ಕ್ರಮಗಳನ್ನು ಅನುಸರಿಸಿದರು. ಹಾಗಾಗಿ, ಈಗ ಡಾರ್ಜಿಲಿಂಗಿನಲ್ಲಿ ಎಲ್ಲೆಡೆ ಸಾವಯವ ಟೀ ಎಸ್ಟೇಟುಗಳೇ ಇವೆ” ಎಂದು ಮಾಹಿತಿ ನೀಡುತ್ತಾರೆ ರಾಜಾ ಬ್ಯಾನರ್ಜಿ.
ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿ ಸಮುದ್ರ ತೀರದ ದಾಪೋಲಿ ಊರಿನ ಗುಡ್ಡದಲ್ಲಿರುವ ಆ ಮಾವಿನ ತೋಟದಲ್ಲಿ ಮುನ್ನೂರು ಮಾವಿನ ಮರಗಳು. ಪ್ರತಿಯೊಂದು ಮರದಲ್ಲಿಯೂ ಮೇ ತಿಂಗಳಿನಲ್ಲಿ ಗೊಂಚಲುಗೊಂಚಲು ಮಾವಿನ ಕಾಯಿಗಳು - ಅಲ್ಫಾನ್ಸೋ ಮಾವು.
ಆ ಹೊತ್ತಿಗೆ ಅಲ್ಲಿ ಬೇಸಗೆಯ ಬಿಸಿ ಜೋರು. ಜೊತೆಗೆ ಸಮುದ್ರದಿಂದ ಗಾಳಿಯಲ್ಲಿ ತೇಲಿ ಬರುವ ತೇವಾಂಶ. ಇವೆರಡೂ ಅಗತ್ಯ - ಅಲ್ಫಾನ್ಸೋ ಮಾವು ಮಾಗಲು, ಕೊಯ್ಲಿಗೆ ತಯಾರಾಗಲು.
ನೊಷಿರ್ ವಾನ್ ಮಿಸ್ತ್ರಿ ೧೪ ಎಕ್ರೆಗಳ ಈ ತೋಟ ಖರೀದಿಸಿದ್ದು ೧೦ ವರುಷಗಳ ಮುಂಚೆ. ಪ್ರತಿಯೊಂದು ಮಾವಿನ ಮರದ ಬಳಿ ಹೋಗಿ ನಿಂತು, ಅದರಿಂದ ನೇತಾಡುವ ಕಾಯಿಗಳನ್ನು ಕಣ್ಣಿಟ್ಟು ಪರಿಶೀಲಿಸುತ್ತಾರೆ. ಅಲ್ಫಾನ್ಸೋ ಕಾಯಿಗಳ ಮೇಲ್-ಮುಂಭಾಗದ ಡುಬ್ಬವು ತರುಣಿಯ ನಸುಗೆಂಪು ಕೆನ್ನೆಯಂತಿರಬೇಕು - ಹಾಗಿದ್ದರೆ, ಆ ಕಾಯಿ ರುಚಿರುಚಿ ಹಣ್ಣಾಗಿ ಬಲಿಯುತ್ತದೆ ಎಂಬುದವರ ಅನುಭವ. ಅದರ ಬದಲಾಗಿ, ಮಾವಿನ ಕಾಯಿಯ ಮೇಲ್ಭಾಗ ಸಪಾಟವಾಗಿದ್ದರೆ ಅದು ಮಾಗುವುದಿಲ್ಲ.
ಇವೆಲ್ಲ ಸಣ್ಣಪುಟ್ಟ ವಿವರಗಳು, ಬಿರುಸಿನ ಬೆಲೆ ಸ್ಪರ್ಧೆಯಿರುವ ಹಾಪುಸ್ (ಮಹಾರಾಷ್ಟ್ರದವರ ಮಾತಿನಲ್ಲಿ ಅಲ್ಫಾನ್ಸೋ ಮಾವಿನ ಮುದ್ದಿನ ಹೆಸರು) ಮಾವು ಮಾರಾಟದಲ್ಲಿ ಮಿಸ್ತ್ರಿ ಅವರಿಗೆ ಮುಖ್ಯವಾಗುತ್ತವೆ. ಈ ಮಾವುಗಳಿಗೆ ಉತ್ತಮ ಬೆಲೆ ಸಿಗಬೇಕಾದರೆ, ಸಂಪೂರ್ಣ ಸಾವಯವ ವಿಧಾನದಲ್ಲೇ ಬೆಳೆಸಿ, ಹಣ್ಣು ಮಾಡಬೇಕೆಂಬುದು ಮಿಸ್ತ್ರಿಯವರ ಅಭಿಪ್ರಾಯ.
ಒಂದು ಬುಟ್ಟಿ ತುಂಬ ಬಲಿತ ಮಾವಿನ ಕಾಯಿಗಳನ್ನು ಕೆಲಸಗಾರರು ಅಂಗಳಕ್ಕೆ ತಂದಾಗ ಮಿಸ್ತ್ರಿ ಅವರಿಂದ ಪುಟ್ಟ ಪರೀಕ್ಷೆ. ಪಾತ್ರೆಯಲ್ಲಿರುವ ನೀರಿಗೆ ಎರಡು ಅಥವಾ ಮೂರು ಕಾಯಿಗಳನ್ನು ಹಾಕುತ್ತಾರೆ. ಅವು ನೀರಿನಲ್ಲಿ ಮುಳುಗಿದರೆ ಚೆನ್ನಾಗಿವೆ ಎಂದರ್ಥ. ಅವು ನೀರಿನಲ್ಲಿ ತೇಲಿದರೆ ಚೆನ್ನಾಗಿಲ್ಲ; ಅಂದರೆ ಆ ಮಾವಿನೊಳಗೆ ಕೆಲವೆಡೆ ಟೊಳ್ಳು ಇರಬಹುದು ಎಂದರ್ಥ. ಅಂಥ ಮಾವುಗಳನ್ನು ದಾಪೋಲಿಯಲ್ಲೇ ಮಾರಾಟ ಮಾಡುತ್ತಾರೆ - ಉಪ್ಪಿನಕಾಯಿ ತಯಾರಿಸಲಿಕ್ಕಾಗಿ.
ಉಪಯುಕ್ತ ಪೇಟೆಂಟುಗಳ ಬಗ್ಗೆ ಕೇಳಿದ್ದೀರಿ. ಅವು ಆದಾಯದ ಮೂಲ. ನಿರುಪಯುಕ್ತ ಪೇಟೆಂಟುಗಳ ಬಗ್ಗೆ ಕೇಳಿದ್ದೀರಾ? ಇವು ಕೆಲಸಕ್ಕೆ ಬಾರದ ಪೇಟೆಂಟುಗಳು. ಅದನ್ನು ಪಡೆದ ವಿಜ್ನಾನಿಯ “ಸ್ವ-ವಿವರ” ದಲ್ಲಿ ಮಾತ್ರ ಇದು ಚಂದ. ಕಾಣಬಹುದು.
ಅದಕ್ಕಾಗಿಯೇ ಇತ್ತೀಚೆಗೆ ಭಾರತದ ಪ್ರಧಾನ ಸಂಶೋಧನಾ ಸಂಸ್ಥೆ ಸಿಎಸ್ಐಆರ್ (ಕೌನ್ಸಿಲ್ ಆಫ್ ಸೈಂಟಿಫಿಕ್ ಆಂಡ್ ಇಂಡಸ್ಟ್ರಿಯಲ್ ರೀಸರ್ಚ್) ವಿವಿಧ ಅಂಗಸಂಸ್ಥೆಗಳಲ್ಲಿ ಇರುವ ಸುಮಾರು ೧೮,೦೦೦ ವಿಜ್ನಾನಿಗಳಿಗೆ ಕಟ್ಟುನಿಟ್ಟಾಗಿ ಆದೇಶ ನೀಡಿದೆ: “ಪೇಟೆಂಟುಗಳ ಬಗ್ಗೆ ಜವಾಬ್ದಾರಿಯಿಂದ ವರ್ತಿಸಿ ಮತ್ತು ನಿರುಪಯುಕ್ತ ಪೇಟೆಂಟುಗಳನ್ನು ಕಿತ್ತು ಬಿಸಾಡಿ.” ಸಿಎಸ್ಐಆರ್ನ ಡೈರೆಕ್ಟರ್ ಜನರಲ್ ಗಿರೀಶ್ ಸಾಹ್ನಿ ತನ್ನ ಇತ್ತೀಚೆಗೆನ ಕಠಿಣ ನುಡಿಗಳ ಪತ್ರದಲ್ಲಿ ಈ ಆದೇಶ ನೀಡಿದ್ದಾರೆ.
ಸರಕಾರದ ಸಂಸ್ಥೆಗಳಲ್ಲಿರುವ ವಿಜ್ನಾನಿಗಳಿಗೆ ಬಹುಶಃ ಇದೇ ಮೊದಲ ಬಾರಿ ಇಂತಹ ಆದೇಶ ನೀಡಲಾಗಿದೆ. ಕಳೆದ ದಶಕದಲ್ಲಿ ನಮ್ಮ ದೇಶದ ವಿಜ್ನಾನಿಗಳಿಗೆ ಪೇಟೆಂಟಿನ “ಜ್ವರ” ಬಂದಿತ್ತು. ಅಂದರೆ, ಬೌದ್ಧಿಕ ಸೊತ್ತಿನ ಹಕ್ಕುಗಳ (ಇಂಟಲೆಕ್ಚುವಲ್ ಪ್ರಾಪರ್ಟಿ ರೈಟ್ಸ್ – ಐಪಿಆರ್) ಪ್ರಾಮುಖ್ಯತೆ ಬಗ್ಗೆ ತಿಳಿದುಕೊಳ್ಳಬೇಕೆಂದು ವಿಜ್ನಾನಿಗಳಿಗೆ ಆಗ್ರಹ. ಸಣ್ಣಪುಟ್ಟ ವಿಷಯಗಳ ಬಗ್ಗೆಯೂ ಪೇಟೆಂಟ್ ಪಡೆಯಲು ಅವರಿಗೆ ಪ್ರೋತ್ಸಾಹ. ಇದು ಯಾವ ಮಟ್ಟಕ್ಕೆ ಮುಟ್ಟಿತೆಂದರೆ, ಭಾರತೀಯ ಕೃಷಿ ಸಂಶೋಧನಾ ಮಂಡಲಿಯಲ್ಲಿ ಸಹಾಯಕ ಡೈರೆಕ್ಟರ್ ಜನರಲ್ ನೇತೃತ್ವದಲ್ಲಿ ವಿಶೇಷ ವಿಭಾಗವೊಂದನ್ನು ಸ್ಥಾಪಿಸಲಾಯಿತು – ಪೇಟೆಂಟುಗಳನ್ನು ಪಡೆಯುವುದನ್ನು ಪ್ರೋತ್ಸಾಹಿಸಲಿಕ್ಕಾಗಿ. ಇದರ ಪರಿಣಾಮವಾಗಿ, ವಿಜ್ನಾನಿಗಳು ಉಪ್ಪಿನಕಾಯಿಯ ಪೇಟೆಂಟಿಗೆ ಅರ್ಜಿ ಸಲ್ಲಿಸಲಿಕ್ಕೂ ಅನುಮತೆತಿ ನೀಡಲಾಯಿತು!
ಎರಡು ವರುಷಗಳ ಮುಂಚೆ, ಮಂಡ್ಯ ಜಿಲ್ಲೆಯ ಉಪ್ಪುಲಗೇರಿಕೊಪ್ಲು ಗ್ರಾಮದ ನಾಗಣ್ಣ (೩೪) ತನ್ನ ಮುಕ್ಕಾಲು ಎಕ್ರೆ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದರು. ಕೃಷಿಯಿಂದ ಜೀವನ ನಿರ್ವಹಣೆ ಕಷ್ಟ ಅನಿಸಿತು. ಹಾಗಾಗಿ, ಹಳ್ಳಿ ತೊರೆದು ಮಡದಿ ಮತ್ತು ಇಬ್ಬರು ಮಕ್ಕಳೊಂದಿಗೆ ಗುಳೆ ಹೊರಟರು - ಮಹಾನಗರ ಬೆಂಗಳೂರಿಗೆ. ಅಲ್ಲಿ ಸಿಕ್ಕಿದ್ದು ಮದುವೆ ಸಭಾಭವನಗಳ ಅಲಂಕಾರ ಮಾಡುವ ಕೆಲಸ. ಅವರ ಗಳಿಕೆ ತಿಂಗಳಿಗೆ ಕೇವಲ ರೂ.೬,೦೦೦.
ಎರಡು ತಿಂಗಳು ಬೆಂಗಳೂರಿನಲ್ಲಿ ಹೇಗೋ ದಿನಗಳೆದರು. ಅಷ್ಟರಲ್ಲಿ ಮದುವೆಗಳ ಸೀಸನ್ ಮುಗಿಯಿತು, ನಾಗಣ್ಣನ ಕೆಲಸವೂ ಕೊನೆಯಾಯಿತು. "ಆ ದೊಡ್ಡ ಊರಿನಲ್ಲಿ ನನ್ನ ಕುಟುಂಬ ಸಾಕೋದು ಕಷ್ಟ ಅಂತ ಗೊತ್ತಾಗಿತ್ತು. ಹೆಂಡತಿ-ಮಕ್ಕಳೊಂದಿಗೆ ನಮ್ಮೂರಿಗೆ ವಾಪಾಸು ಬಂದೆ" ಎಂದು ನೆನಪು ಮಾಡಿ ಕೊಳ್ಳುತ್ತಾರೆ ನಾಗಣ್ಣ.
ಮುಂದೇನು? ಎಂದು ಚಿಂತಿಸುತ್ತಿದ್ದಾಗ ನಾಗಣ್ಣನಿಗೆ ಎಲ್. ಆನಂದ ಎಂಬ ಕೃಷಿ ಪದವೀಧರ ಯುವಕನ ಪರಿಚಯ. ಪಕ್ಕದ ಹಾಸನ ಜಿಲ್ಲೆಯವರಾದ ಆನಂದ ರೈತರನ್ನು ಭೇಟಿಯಾಗಿ ಆಗ್ರಹಿಸುತ್ತಿದ್ದರು - ಸುಧಾರಿತ ರೀತಿಯಲ್ಲಿ ಕೃಷಿ ಮಾಡಬೇಕೆಂದು. ಅವರು ತಾಜಾ ಕೃಷಿ ಉತ್ಪನ್ನ ಸರಬರಾಜು ಕಂಪೆನಿ ಲಾರೆನ್ಸ್ ಡೇಲ್ ಅಗ್ರೋ ಪ್ರೊಸೆಸಿಂಗ್ (ಎಲ್.ಇ.ಎ.ಎಫ್.) ಕಂಪೆನಿಯ ಪ್ರತಿನಿಧಿ. ಉತ್ತಮ ಬೀಜ, ಕಡಿಮೆ ರಾಸಾಯನಿಕ ಗೊಬ್ಬರ, ಅಂತರ ಬೆಳೆಗಳು ಮತ್ತು ತಂತ್ರಜ್ನಾನ ಬಳಸಿ, ನಾಗಣ್ಣರ ಸಣ್ಣ ಜಮೀನಿನಿಂದ ಹೆಚ್ಚು ಇಳುವರಿ ಪಡೆಯುವುದು ಹೇಗೆಂದು ಆನಂದ ವಿವರಿಸಿದರು. ನಾಗಣ್ಣ ಬೆಳೆಯುತ್ತಿದ್ದ ತರಕಾರಿಗಳನ್ನು ಚೆನ್ನಾಗಿ ಪ್ಯಾಕ್ ಮಾಡಿ, ಮಾರಾಟ ಮಾಡಿದರೆ ಹೆಚ್ಚು ಲಾಭ ಗಳಿಸಲು ಸಾಧ್ಯವೆಂದು ತಿಳಿಸಿದರು.
ಇದಾದ ನಂತರ ನಾಗಣ್ಣ ಕೈಗೊಂಡ ದೊಡ್ಡ ನಿರ್ಧಾರ: ಸುಧಾರಿತ ರೀತಿಯಲ್ಲಿ ಕೃಷಿ ಮಾಡುವುದು. ಅದಕ್ಕಾಗಿ ಮಂಡ್ಯದ ಮಳವಳ್ಳಿ ತೋಟಗಾರಿಕಾ ಕೃಷಿಕ ಉತ್ಪಾದಕರ ಕಂಪೆನಿ ನಿಯಮಿತದಲ್ಲಿ ರೂ.೧,೦೦೦ದ ಷೇರು ಭಂಡವಾಳ ಹೂಡಿದರು. ಇದು ಎಲ್.ಇ.ಎ.ಎಫ್.ನ ಸಹಭಾಗಿ ಕಂಪೆನಿ. ಅನಂತರ ಸುಧಾರಿತ ಬೀಜ ಖರೀದಿಸಿ, ಆನಂದರ ಸಲಹೆಯಂತೆಯೇ ಕೃಷಿ ಮಾಡಿದರು.
ಹದಿನಾರು ವರುಷಗಳ ಮುಂಚೆ, ಫೆಬ್ರವರಿ ೨೦೦೧ರಲ್ಲಿ ಢೆಲ್ಲಿಯ “ಡೌನ್ ಟು ಅರ್ತ್” ಪಾಕ್ಷಿಕ ಪತ್ರಿಕೆ ಪ್ರಕಟಿಸಿದ ಕೇರಳದ ಕಾಸರಗೋಡಿನ ಪಡ್ರೆಯಲ್ಲಿ ಎಂಡೋಸಲ್ಫಾನಿನ ಮಾರಕ ವಿಷದಿಂದಾಗಿ ಜನರು ಸಾಯುತ್ತಿರುವ ಹಗರಣದ ವರದಿ ದೊಡ್ಡ ಸುದ್ದಿಯಾಯಿತು.
ಯಾಕೆಂದರೆ, ಎಲ್ಲ ಸುರಕ್ಷಿತಾ ನಿಯಮಗಳನ್ನು ಗಾಳಿಗೆ ತೂರಿ, ಮರಣಾಂತಿಕ ಕೀಟನಾಶಕ ಎಂಡೋಸಲ್ಫಾನನ್ನು ಹೆಲಿಕಾಪ್ಟರಿನ ಮೂಲಕ ಕೇರಳದ ಗೇರು ಅಭಿವೃದ್ಧಿ ನಿಗಮದ ಗೇರು ತೋಟಗಳ ಮೇಲೆ ಇಪ್ಪತ್ತು ವರುಷಗಳ ಅವಧಿಯುದ್ದಕ್ಕೂ ಸಿಂಪಡಿಸಲಾಗಿತ್ತು. ಅದರಿಂದಾಗಿ, ಸೆರೆಬ್ರಲ್ ಪಾಲ್ಸಿ, ಎಪಿಲೆಪ್ಸಿ, ಹುಟ್ಟುವಾಗಲೇ ಅಂಗವಿಕಲತೆ, ಮಾನಸಿಕ ಮತ್ತು ದೈಹಿಕ ವಿಕಲತೆ, ಬಂಜೆತನ, ಪಿತ್ತಕೋಶದ ಕ್ಯಾನ್ಸರ್, ರಕ್ತದ ಕ್ಯಾನ್ಸರ್, ಅಸ್ತಮಾ ಇಂತಹ ಭೀಕರ ರೋಗಗಳಿಂದ ಪಡ್ರೆ ಪ್ರದೇಶದ ಹಲವಾರು ಜನರು ನರಳುತ್ತಿದ್ದಾರೆ. ಹೆಲಿಕಾಪ್ಟರಿನಿಂದ ಎಂಡೋಸಲ್ಫಾನ್ ಸಿಂಪಡಣೆ ಆರಂಭಿಸಿದಾಗ ಆದ ಅನಾಹುತಗಳನ್ನು ಗಮನಿಸಿದ್ದ ಅಭಿವೃದ್ಧಿ ಪತ್ರಕರ್ತ ಶ್ರೀಪಡ್ರೆಯವರು “ಮನುಷ್ಯ ಜೀವ ಗೇರುಬೀಜಗಳಿಗಿಂತ ಅಗ್ಗ” ಎಂಬ ಇಂಗ್ಲಿಷ್ ಲೇಖನ ಬರೆದು ಎಲ್ಲರನ್ನೂ ಎಚ್ಚರಿಸಿದ್ದರು.
ಎಂಡೋಸಲ್ಫಾನಿನ ಅವಿವೇಕದ ಹಾಗೂ ಬೇಜವಾಬ್ದಾರಿಯ ಸಿಂಪಡಣೆಯಿಂದಾಗಿ ಭೀಕರ ದುಷ್ಪರಿಣಾಮಗಳು ಆದದ್ದು ಮನುಷ್ಯರ ಮೇಲೆ ಮಾತ್ರವಲ್ಲ; ಅಲ್ಲಿನ ಪರಿಸರವೂ ವಿಷಮಯವಾಗಿ ಜೇನ್ನೊಣಗಳು, ಕಪ್ಪೆಗಳು ಮತ್ತು ಮೀನುಗಳು ನಿರ್ನಾಮವಾದವು. ಢೆಲ್ಲಿಯ ಸೆಂಟರ್ ಫಾರ್ ಸೈನ್ಸ್ ಆಂಡ್ ಎನ್ವೈರೊನ್ಮೆಂಟ್ (ಸಿ.ಎಸ್.ಇ.)ಯ ಮಾಲಿನ್ಯ ಕಣ್ಗಾವಲು ಪ್ರಯೋಗಾಲಯವು, ಈ ಎಲ್ಲ ದುಷ್ಪರಿಣಾಮಗಳಿಗೆ ಎಂಡೋಸಲ್ಫಾನ್ ಸಿಂಪಡಣೆ ಕಾರಣವೆಂದು ಪುರಾವೆಗಳನ್ನು ಒದಗಿಸಿತು.
ಅನಂತರ ನಡೆದದ್ದು ಜನಸಮುದಾಯ ಮತ್ತು ಪೀಡೆನಾಶಕ ಉತ್ಪಾದಕ ಕಂಪೆನಿಗಳ ನಡುವೆ ೧೬ ವರುಷಗಳ ದೀರ್ಘ ಕಾನೂನಿನ ಸಮರ. ಇದರ ಪರಿಣಾಮವಾಗಿ, ೨೦೧೧ರಲ್ಲಿ ಸುಪ್ರೀಂ ಕೋರ್ಟ್ ಎಂಡೋಸಲ್ಫಾನನ್ನು ನಿಷೇಧಿಸಿದ್ದು ಈಗ ಚರಿತ್ರೆ.
ಮಂಗೋಲಿಯಾದಿಂದ ಗಗನಕ್ಕೇರಿ ಸಾಗುವ ಅಮುರ್ ಗಿಡುಗಗಳ ಆಕಾಶಯಾನ ಕೊನೆಗೊಳ್ಳುವುದು ೨೨,೦೦೦ ಕಿಮೀ ದೂರದ ದಕ್ಷಿಣ ಆಫ್ರಿಕಾದಲ್ಲಿ. ತಮ್ಮ ದೀರ್ಘ ಪ್ರಯಾಣದ ನಡುವೆ ಅವು ನಾಗಾಲ್ಯಾಂಡಿನಲ್ಲಿ ಸಾವಿರಸಾವಿರ ಸಂಖ್ಯೆಯಲ್ಲಿ ಕೆಳಕ್ಕೆ ಇಳಿಯುತ್ತಿದ್ದವು – ಒಂದು ತಿಂಗಳು ಕೀಟಗಳನ್ನು ತಿಂದು ಮತ್ತೆ ಆಕಾಶಯಾನಕ್ಕೆ ಸಜ್ಜಾಗಲಿಕ್ಕಾಗಿ.
ಆದರೆ, ಅಲ್ಲಿ ವರುಷವರುಷವೂ ಅವುಗಳ ಮಾರಣಹೋಮ. ಲೊತಾ ಮತ್ತು ಇತರ ಬುಡಕಟ್ಟು ಜನರಿಂದ ಪ್ರತಿ ವರುಷ ೧೨,೦೦೦ – ೧೪,೦೦೦ ಅಮುರ್ ಗಿಡುಗಗಳ ಕೊಲೆ – ಬುಲೆಟ್ ಮತ್ತು ಬಾಣಗಳಿಂದ – ಆಹಾರಕ್ಕಾಗಿ ಮತ್ತು ವಾಣಿಜ್ಯ ಉದ್ದೇಶಗಳಿಗಾಗಿ.
ಅಮಾಯಕ ಅಮುರ್ ಗಿಡುಗಗಳನ್ನು ಉಳಿಸಲು ಏನಾದರೂ ಮಾಡಲೇ ಬೇಕಾಗಿತ್ತು. ನಾಗಾಲ್ಯಾಂಡ್ ಸರಕಾರ ಮತ್ತು ಆಶಾ ಹಾಗೂ ಪಾನ್ಗ್ಟಿ ಗ್ರಾಮಗಳ ಮುಖ್ಯಸ್ಥರು ಇದಕ್ಕಾಗಿ ಕೈಜೋಡಿಸಿದರು. “ಅಮುರ್ ಗಿಡುಗಗಳ ರಕ್ಷಣಾ ಸಂಘಟನೆ” ಸ್ಥಾಪಿಸಿ, ಅವುಗಳ ಬೇಟೆ ನಿಷೇಧಿಸಿದರು. ಇದನ್ನು ಉಲ್ಲಂಘಿಸಿದವರನ್ನು ಬಂಧಿಸಿ ಶಿಕ್ಷೆ ನೀಡಲಾಯಿತು.
ಈ ಆಂದೋಲನದಿಂದಾಗಿ ಕ್ರಮೇಣ ಅಮುರ್ ಗಿಡುಗಗಳ ಕೊಲೆಗಡುಕರೇ ಅವನ್ನು ರಕ್ಷಿಸುವ ಯೋಧರಾದರು. ಇದೆಷ್ಟು ಯಶಸ್ವಿಯಾಯಿತೆಂದರೆ, ಮುಂದಿನ ವರುಷ ನಾಗಾಲ್ಯಾಂಡಿನಲ್ಲಿ ಒಂದೇ ಒಂದು ಅಮುರ್ ಗಿಡುಗವನ್ನೂ ಕೊಲ್ಲಲಿಲ್ಲ.
ಈ ಅಪ್ರತಿಮ ಸಾಧನೆಗಾಗಿ ಇಡೀ ಜಗತ್ತು ನಾಗಾಲ್ಯಾಂಡಿನ ಜನತೆಯನ್ನು ಅಭಿನಂದಿಸಿತು. ಈಗ ನಾಗಾಲ್ಯಾಂಡಿಗೆ “ಜಗತ್ತಿನ ಗಿಡುಗಗಳ ರಾಜಧಾನಿ” ಎಂಬ ಹೆಸರು. ಇದರಿಂದಾಗಿ ಲಾಭವಾಗಿರುವುದು ಪಾನ್ಗ್ಟಿ ಮತ್ತು ಸುತ್ತಮುತ್ತಲಿನ ಹಳ್ಳಿಗಳಿಗೆ – ಅಲ್ಲೀಗ ಪ್ರವಾಸೋದ್ಯಮದ ಪ್ರಗತಿ. ಇದರಿಂದಾಗಿ ಹೆಚ್ಚೆಚ್ಚು ಭಂಡವಾಳ ಹೂಡಿಕೆ ಮತ್ತು ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ಅವಕಾಶ. ಪರಿಸರ ಹಾಗೂ ಜೀವಸಂಕುಲದ ಸಂರಕ್ಷಣೆ ಹೇಗೆ ಲಾಭದಾಯಕವಾಗ ಬಹುದು ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ.
ಚಾಮರಾಜ ನಗರ ಜಿಲ್ಲೆಯ ಕೆಳಸೂರು ಗ್ರಾಮ ಪಂಚಾಯತ್ ಪ್ರದೇಶದಲ್ಲಿ ಚೆಂಡುಮಲ್ಲಿಗೆಯ ಘಾಟು ವಾಸನೆ ಹಬ್ಬಿದೆ. ಅದಕ್ಕಿತಂತಲೂ ದಟ್ಟವಾಗಿ ಹಬ್ಬಿದೆ – ರೈತರ ಪ್ರತಿಭಟನೆಯ ಕಾವು.
ಕಳೆದ ಎರಡು ದಶಕಗಳಲ್ಲಿ ಅಲ್ಲಿನ ಮಳೆಯಾಶ್ರಿತ ಗುಂಡ್ಲುಪೇಟೆ ತಾಲೂಕಿನ ಹಳ್ಳಿಗಳಲ್ಲಿ ಹೂವಿನ ಬೇಸಾಯದ ಸುಗ್ಗಿಯಿಂದಾಗಿ ಬದಲಾವಣೆಯ ಗಾಳಿ ಬೀಸಿದೆ. ಅಲ್ಲಿ ಹಾದು ಹೋಗುವ ಮೈಸೂರು – ಕೊಝಿಕೋಡ್ ಹೆದ್ದಾರಿಯ ಇಬ್ಬದಿಗಳಲ್ಲಿ ಕಿತ್ತಳೆ ಬಣ್ಣದ ಚೆಂಡುಮಲ್ಲಿಗೆ ಮತ್ತು ಹೊಳಪು-ಹಳದಿ ಬಣ್ಣದ ಸೂರ್ಯಕಾಂತಿ ಹೂಗಳ ಹೊಲಗಳ ಸಾಲು. ಇದರಿಂದಾಗಿ ಅಲ್ಲಿನ ಸಣ್ಣ ಹಾಗೂ ಅತಿಸಣ್ಣ ರೈತರಿಗೆ ರಫ್ತು ಮಾರುಕಟ್ಟೆಯ ಪರಿಚಯವಾಗಿದೆ. ಮಾತ್ರವಲ್ಲ, ಹಲವು ಕಂಪೆನಿಗಳಿಗೆ ಅಲ್ಲಿ ತಮ್ಮ ಕಾರ್ಖಾನೆ ಸ್ಥಾಪಿಸಲು ಆಕರ್ಷಣೆ. ಅವುಗಳಲ್ಲೊಂದು ಕಂಪೆನಿಗೆ ರೈತರ ಪ್ರತಿಭಟನೆಯ ಬಿಸಿ ತಟ್ಟಿದೆ.
ಇತ್ತೀಚೆಗೆ ಸುಮಾರು ೧,೦೦೦ ರೈತರು ಕಗ್ಗದಲಹುಂಡಿ ಗ್ರಾಮದಲ್ಲಿ ಜಮಾಯಿಸಿದ್ದರು – ತ್ರಿಯಂಬಕಪುರ ಗ್ರಾಮದಲ್ಲಿ ಚೈನಾ ಕಂಪೆನಿಯೊಂದು ಚೆಂಡುಮಲ್ಲಿಗೆ ಸಾರ ಭಟ್ಟಿಯಿಳಿಸುವ ಕಾರ್ಖಾನೆ ಸ್ಥಾಪಿಸುವುದನ್ನು ಪ್ರತಿಭಟಿಸಲಿಕ್ಕಾಗಿ. ಚೆಂಗುವಾಂಗ್ ನ್ಯಾಚುರಲ್ ಎಕ್ಸ್ಟ್ರಾಕ್ಟ್ಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ಎಂಬ ಹೆಸರಿನ ಆ ಕಂಪೆನಿಯ ಮುಖ್ಯ ಉತ್ಪನ್ನಗಳು: ಪ್ರಾಕೃತಿಕ ಬಣ್ಣಗಳು ಮತ್ತು ಚೆಂಡುಮಲ್ಲಿಗೆ ಹೂಗಳಿಂದ ಒಲಿಯೋರೆಸಿನ್ ಎಂಬ ಔಷಧೀಯ ಸಾರ.
ರೈತರ ಪ್ರತಿಭಟನೆಯ ಸೊಲ್ಲು ಅಡಗಿಸಲಿಕ್ಕಾಗಿ ಪೊಲೀಸರಿಂದ ಲಾಠೀ ಚಾರ್ಚ್ ಮತ್ತು ೨೯ ಪ್ರತಿಭಟನಾಕಾರರ ಬಂಧನ. ಅವರನ್ನು ಅನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಜಿಲ್ಲಾಡಳಿತವು ಈಗ ಆ ಘಟಕದ ಸುತ್ತಮುತ್ತ ನಿಷೇಧಾಜ್ನೆ ಹೇರಿದೆ. ಕಾರ್ಖಾನೆಯ ಗೇಟಿಗೆ ಬೀಗ ಹಾಕಲಾಗಿದ್ದು, ಗೇಟಿನ ಹೊರಗಡೆ ಪೊಲೀಸ್ ವ್ಯಾನಿನಲ್ಲಿ ಪೊಲೀಸರು ಕಾವಲು ಕಾಯುತ್ತಿದ್ದಾರೆ. ಬಸ್ ನಿಲ್ದಾಣದಲ್ಲಿ ಮತ್ತು ಟೀ ಸ್ಟಾಲುಗಳಲ್ಲಿ ಗುಂಪು ಸೇರುವ ಹಳ್ಳಿಗರಿಂದ ತಮಗಾದ ಅನ್ಯಾಯ ಮತ್ತು ಜಿಲ್ಲಾಡಳಿತದ ಅಸಡ್ಡೆಯ ಬಗ್ಗೆ ಚರ್ಚೆ.
ರೂಪಾಯಿ ೩೬ ಕೋಟಿಯ ಚೈನಾ ಕಂಪೆನಿ










