ಅಲ್ಲಿ ಎತ್ತಕಂಡರತ್ತ ಆಳೆತ್ತರದ ಮಣ್ಣಿನ ಶಿಲ್ಪಗಳು. ಹಳ್ಳಿ ಬದುಕಿನ ಕಾಯಕಗಳು, ಬೇಸಾಯದ ಕೆಲಸಗಳು, ವಿವಿಧ ಗುಡಿಕೈಗಾರಿಕೆಗಳು, ಹತ್ತಾರು ಜಾನಪದ ಕಲಾಭಂಗಿಗಳು - ಇವೆಲ್ಲದರಲ್ಲಿ ನಿರತರಾಗಿರುವ ವ್ಯಕ್ತಿಗಳ ಶಿಲ್ಪಗಳು. ಪ್ರತಿಯೊಂದು ಶಿಲ್ಪವೂ ಜೀವಂತ ಎನಿಸುವಂತಿದೆ!
ಅದುವೇ ಉತ್ಸವ್ ರಾಕ್ ಗಾರ್ಡನ್. ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ಗೊಟಗೋಡಿ ಗ್ರಾಮದಲ್ಲಿ ಪುಣೆ - ಬೆಂಗಳೂರು ಹೆದ್ದಾರಿಯ ಪಕ್ಕದಲ್ಲಿರುವ ಶೈಕ್ಷಣಿಕ ಸಾಂಸ್ಕೃತಿಕ ಪ್ರವಾಸಿ ಕೇಂದ್ರ. ಆರು ವರುಷಗಳ ಮುನ್ನ, ೧೧ ಜನವರಿ ೨೦೧೪ರಂದು ಅಲ್ಲಿನ ಅದ್ಭುತ ಕಲಾಕೃತಿಗಳನ್ನು ನೋಡುತ್ತಾ ನೋಡುತ್ತಾ ಅರ್ಧ ದಿನವೇ ಕಳೆದಿತ್ತು.
ಆರೂವರೆ ಎಕ್ರೆ ಜಮೀನಿನಲ್ಲಿ ವ್ಯಾಪಿಸಿರುವ ಉತ್ಸವ್ ರಾಕ್ ಗಾರ್ಡನ್ ಕಲಾಕಾರ ಟಿ.ಬಿ. ಸೊಲಬಕ್ಕನವರ್ ಅವರ ಕನಸಿನ ಕೂಸು. ಆ ದಿನ ನನ್ನನ್ನು ಅಲ್ಲಿಗೆ ಕರೆದೊಯ್ದವರು ಉತ್ತರಕನ್ನಡದ ಶಿರಸಿ ಹತ್ತಿರದ ಬರಹಗಾರ ಗೆಳೆಯ ಶಿವಾನಂದ ಕಳವೆ. ಅವರು ಸೊಲಬಕ್ಕನವರನ್ನು ಪರಿಚಯಿಸಿದ್ದು ಹೀಗೆ: "ಒಬ್ಬ ಕಲಾವಿದ ಏನು ಮಾಡಬಹುದು? ಎಂಬುದನ್ನು ನಾವಿಲ್ಲಿ ಕಣ್ಣಾರೆ ಕಾಣಬಹುದು. ಒಂದ್ ಕಾಲದಲ್ಲಿ ಸೊಲಬಕ್ಕನವರ್ ಬೆಂಗಳೂರಿನಲ್ಲಿ ಮೊಡರ್ನ ಆರ್ಟ್ ಮಾಡ್ತಾ ಇದ್ದರು. ಆದರೆ ಅವರ ಕಲೆ ನೋಡಲು ಬರುತ್ತಿದ್ದವರು ಬೆರಳೆಣಿಕೆಯ ಜನರು.
ಮಂಗಳೂರಿನ ವಾರ್ಷಿಕ “ಹಬ್ಬ”ಗಳಲ್ಲೊಂದು ಜನವರಿ ತಿಂಗಳ ಪ್ರಜಾಪ್ರಭುತ್ವ ದಿನದ ಸಂದರ್ಭದಲ್ಲಿ ಕದ್ರಿ ಉದ್ಯಾನದಲ್ಲಿ ಏರ್ಪಡಿಸಲಾಗುವ “ಫಲಪುಷ್ಪ ಪ್ರದರ್ಶನ.”
೨೦೨೦ರ ಫಲಪುಷ್ಪ ಪ್ರದರ್ಶನ ಮೂರು ದಿನ (ಜನವರಿ ೨೪ರಿಂದ ೨೬ರ ವರೆಗೆ) ಜರಗಿತು. ಪ್ರತಿ ವರುಷದಂತೆ ಈ ವರುಷವೂ ಹೂಗಳಿಂದ ರಚಿಸಿದ ವಿಶೇಷ ಕಲಾಕೃತಿಗಳು ಜನಾಕರ್ಷಣೆಯ ಕೇಂದ್ರಗಳಾಗಿದ್ದವು. ಕೇಸರಿ ಸೇವಂತಿಗೆ ಹೂಗಳಿಂದ ಸ್ವಾಮಿ ವಿವೇಕಾನಂದರ ಮೂರ್ತಿ, ಬಿಳಿ ಸೇವಂತಿಗೆ ಹೂಗಳಿಂದ ಹಾರುವ ಪಾರಿವಾಳದ ಕಲಾಕೃತಿ ಮತ್ತು ಕೆಂಪು ಗುಲಾಬಿಗಳಿಂದ ಐಸ್ಕ್ರೀಮ್ ಕೋನ್ ರಚಿಸಿ ಪ್ರದರ್ಶನಕ್ಕೆ ಇಡಲಾಗಿತ್ತು. ಇವುಗಳೊಂದಿಗೆ ಸೆಲ್ಫೀ ತೆಗೆಯುವುದೆಂದರೆ ಹಲವರಿಗೆ ಖುಷಿಯೋ ಖುಷಿ.
ಕದ್ರಿ ಉದ್ಯಾನದಲ್ಲಿ ಆಕಾಶವಾಣಿಯ ಕಡೆಗಿರುವ ಪ್ರದೇಶದಲ್ಲಿ ಸುಮಾರು ೪೦ ಮಳಿಗೆಗಳಲ್ಲಿ ಹೂಹಣ್ಣುತರಕಾರಿ ಬೀಜಗಳು; ಕೃಷಿ ಸಾಧನಸಲಕರಣೆಗಳು; ಕುಂಡಗಳು, ಮಣ್ಣಿನ ಮಡಕೆ, ಹೂಜಿ, ಪಾತ್ರೆ ಇತ್ಯಾದಿ ಜನೋಪಯೋಗಿ ವಸ್ತುಗಳು; ಉಪ್ಪಿನಕಾಯಿ, ಹಪ್ಪಳ, ಸಂಡಿಗೆ, ಜಾಮ್, ಜ್ಯೂಸ್ ಮುಂತಾದ ಮೌಲ್ಯವರ್ಧಿತ ವಸ್ತುಗಳು; ಚಿಪ್ಸ್, ಚಕ್ಕುಲಿ, ತುಕಡಿ, ಉಂಡೆ ಇತ್ಯಾದಿ ತಿಂಡಿತಿನಿಸುಗಳು; ಉಡುಪುಗಳು, ಪುಸ್ತಕಗಳು – ಇಂತಹ ಹತ್ತುಹಲವು ವಸ್ತುಗಳು ಬಿರುಸಿನಿಂದ ಮಾರಾಟವಾದವು. ಸರಕಾರದ ವಿವಿಧ ಇಲಾಖೆಗಳ ಮಾಹಿತಿ ಮಳಿಗೆಗಳೂ ಅಲ್ಲಿದ್ದವು.
ಇವತ್ತು ಸಂಕ್ರಾಂತಿಯ ಶುಭ ದಿನ. ಸಂಕ್ರಾಂತಿ ಎಂದರೆ ದಾಟುವುದು. ಸೂರ್ಯನು ಒಂದು ರಾಶಿಯಿಂದ ಇನ್ನೊಂದಕ್ಕೆ ದಾಟುವ ದಿನವೇ ಸಂಕ್ರಾಂತಿ ಅಥವಾ ಸಂಕ್ರಮಣ. ಒಂದು ರಾಶಿಗೆ ಪ್ರವೇಶಿಸುವ ಸೂರ್ಯ ಒಂದು ತಿಂಗಳ ಅವಧಿ ಅಲ್ಲಿರುತ್ತಾನೆ. ಹಾಗಾಗಿ, ಒಂದು ವರುಷದಲ್ಲಿ ೧೨ ಸಂಕ್ರಾಂತಿಗಳು. ಯಾಕೆಂದರೆ ಮೇಷದಿಂದ ಮೀನದ ವರೆಗೆ ೧೨ ರಾಶಿಗಳಿವೆ.
ಸೂರ್ಯನು ಮಕರ ರಾಶಿ ಪ್ರವೇಶಿಸುವ ದಿನವೇ ಮಕರ ಸಂಕ್ರಾಂತಿ. ಇದು ಉತ್ತರಾಯಣದ ಆರಂಭ. ಶುಭಕಾರ್ಯಗಳಿಗೆ ಉತ್ತರಾಯಣ ಸೂಕ್ತವಾದ ಕಾರಣ ಮಕರ ಸಂಕ್ರಾಂತಿಗೆ ಮಹತ್ವ. ಸೂರ್ಯೋದಯವನ್ನು ಗಮನಿಸಿದ್ದೀರಾ? ಪೂರ್ವದ ಬಲಕ್ಕೆ (ಅಂದರೆ ಉತ್ತರಕ್ಕೆ) ಅಥವಾ ಎಡಕ್ಕೆ (ಅಂದರೆ ದಕ್ಷಿಣಕ್ಕೆ) ಸೂರ್ಯೋದಯ. ಚಳಿಗಾಲದಲ್ಲಿ ಹಗಲಿನ ಅವಧಿ ಕಡಿಮೆ, ರಾತ್ರಿಯ ಅವಧಿ ಜಾಸ್ತಿ. ಇದಕ್ಕೆ ಅನುಸಾರವಾಗಿ, ರಾತ್ರಿಯ ಅವಧಿ ಜಾಸ್ತಿಯಾದಂತೆ, ಸೂರ್ಯ ದಕ್ಷಿಣ ದಿಕ್ಕಿಗೆ ಹೆಚ್ಚು ಚಲಿಸುವುದನ್ನು ಕಾಣಬಹುದು.
ಮಕರ ಸಂಕ್ರಾಂತಿಯ ಮುಂಚಿನ ದಿನಗಳಲ್ಲಿ ದಕ್ಷಿಣದ ತುದಿಯನ್ನು ತಲಪುವ ಸೂರ್ಯ, ಮಕರ ಸಂಕ್ರಾಂತಿಯಂದು ವಿರುದ್ಧ ದಿಕ್ಕಿಗೆ (ಅಂದರೆ ಉತ್ತರಕ್ಕೆ) ಚಲಿಸಲು ಆರಂಭಿಸುತ್ತಾನೆ. ಅದುವೇ ಉತ್ತರಾಯಣದ ಮೊದಲಿನ ದಿನ. ಉತ್ತರಾಯಣದ ಆರಂಭ ಬೇಸಗೆಯ ಆರಂಭವನ್ನು ಸೂಚಿಸುತ್ತದೆ. ಬೇಸಗೆಯಲ್ಲಿ (ಚಳಿಗಾಲಕ್ಕೆ ವಿರುದ್ಧವಾಗಿ) ಹಗಲಿನ ಅವಧಿ ಜಾಸ್ತಿ, ರಾತ್ರಿಯ ಅವಧಿ ಕಡಿಮೆ.
ಜನವರಿ ೧೨ ಸ್ವಾಮಿ ವಿವೇಕಾನಂದರ ಜಯಂತಿ ದಿನ. ಗೊಂದಲದ ಬೀಡಾಗಿರುವ ನಮ್ಮ ಬದುಕಿನಲ್ಲಿ ಆದರ್ಶಪ್ರಾಯ ವ್ಯಕ್ತಿ ಯಾರೆಂಬ ಪ್ರಶ್ನೆಗೆ ಸಮರ್ಥ ಉತ್ತರವಾಗಿ ನಿಲ್ಲುವವರು ಸ್ವಾಮಿ ವಿವೇಕಾನಂದ. ಅವರ ಬರಹಗಳನ್ನು ಓದುತ್ತ, ಅವರ ಚಿಂತನೆಗಳನ್ನು ಮಥಿಸುತ್ತ ಹೋದಂತೆ ಈ ಮಾತು ಮತ್ತೆಮತ್ತೆ ಮನದಟ್ಟಾಗುತ್ತದೆ.
ಸ್ವಾಮಿ ವಿವೇಕಾನಂದರು ಇಂದಿನ ಕಾಲಮಾನದಲ್ಲಿ ಯಾಕೆ ಮುಖ್ಯವಾಗುತ್ತಾರೆ ಎಂದರೆ ಅವರು ನುಡಿದಂತೆ ನಡೆದವರು. ನುಡಿ ಒಂದು, ನಡೆ ಇನ್ನೊಂದು ಎಂಬಂತೆ ಜೀವಿಸುವ ಬಹುಪಾಲು ಜನರಿಗೆ ಹೋಲಿಸಿದಾಗ, ನುಡಿದಂತೆ ನಡೆದ ಸ್ವಾಮಿ ವಿವೇಕಾನಂದರದ್ದು ಪ್ರತಿಯೊಬ್ಬರನ್ನೂ ಪ್ರಭಾವಿಸಬಲ್ಲ ಪ್ರಖರ ವ್ಯಕ್ತಿತ್ವ.
ತ್ಯಾಗ ಮತ್ತು ಸೇವೆ ಬಗ್ಗೆ ಅವರ ವ್ಯಾಖ್ಯಾನ, ಚಿಂತನೆ ಹಾಗೂ ವಿವರಣೆ ನಮ್ಮ ಕಣ್ಣು ತೆರೆಸುವಂತಿದೆ. "ತ್ಯಾಗ ಮತ್ತು ಸೇವೆ ಭಾರತದ ಅವಳಿ ಆದರ್ಶಗಳು” ಎಂದಿರುವ ಸ್ವಾಮಿ ವಿವೇಕಾನಂದರು, “ಅವನ್ನು ನಾವು ಪಾಲಿಸಿದಷ್ಟೂ ರಾಷ್ಟ್ರದ ಉತ್ಥಾನದ ಸೋಪಾನಗಳು ಸುರಕ್ಷಿತವಾಗುತ್ತವೆ” ಎಂದು ಘೋಷಿಸಿದ್ದಾರೆ.
ಹೊಸ ವರುಷ ಮತ್ತೆಮತ್ತೆ ಬರುತ್ತದೆ. ಅದು ಕಾಲ ನಿಯಮ. ಹೊಸ ವರುಷ ಬಂದಾಗ ಹೊಸತನದಿಂದ ಮುನ್ನಡೆಯುದಷ್ಟೇ ನಾವು ಮಾಡಬಹುದಾದ ಕೆಲಸ.
ಅದಕ್ಕಾಗಿ "ಹೊಸ ವರುಷದ ಸಂಕಲ್ಪ”ಗಳನ್ನು ಮಾಡುವ ಹುಮ್ಮಸ್ಸು ಹಲವರಿಗೆ. ಇದು ಒಳ್ಳೆಯ ಕೆಲಸ. ಆದರೆ, ಈ ಸಂಕಲ್ಪಗಳು ಮಳೆಗಾಲದ ಮಿಂಚಿನಂತಾಗಬಾರದು ಅಷ್ಟೇ. ಸಂಕಲ್ಪಗಳನ್ನು ಸಾಧಿಸುವ ಛಲ ಬೆಳೆಸಿಕೊಳ್ಳೋಣ.
ಎಲ್ಲರೂ ಸಾಧಿಸಬಹುದಾದ ಐದು ಸಂಕಲ್ಪಗಳನ್ನು ಪರಿಶೀಲಿಸೋಣ.
೧)ಮನೆಯಿಂದ ಹೋಗುವಾಗೆಲ್ಲ ಬಟ್ಟೆ ಚೀಲವೊಂದನ್ನು ಒಯ್ಯುವುದು. ಖರೀದಿಸಿದ ವಸ್ತುಗಳನ್ನೆಲ್ಲ ಮನೆಗೆ ತರಲಿಕ್ಕಾಗಿ ಅದರ ಬಳಕೆ ಮಾಡೋಣ. ಈ ವರೆಗೆ ದಿನಕ್ಕೆ ಸರಾಸರಿ ಒಂದು ಪ್ಲಾಸ್ಟಿಕ್ ಕೈಚೀಲ ತರುತ್ತಿದ್ದರೆ, ವರುಷಕ್ಕೆ ೩೬೫ ಪ್ಲಾಸ್ಟಿಕ್ ಕೈಚೀಲ ಮನೆಗೆ ಬರುತ್ತಿತ್ತು. ಇನ್ನು ಅದು ತಪ್ಪಿದರೆ ಅಷ್ಟರ ಮಟ್ಟಿಗೆ ನನ್ನಿಂದಾಗುವ ಪರಿಸರ ಹಾನಿ ತಪ್ಪಿಸಿದಂತಾಯಿತು.
೨)ತಿಂಗಳಿಗೊಂದಾದರೂ ಸದಭಿರುಚಿಯ ಪುಸ್ತಕ ಖರೀದಿಸಿ ಓದುವುದು. ನಾವು ಓದುವ ಅಭ್ಯಾಸ ಮುಂದುವರಿಸದಿದ್ದರೆ, ಮುಖ್ಯ ಕೌಶಲ್ಯವೊಂದನ್ನು ಕಳೆದುಕೊಳ್ಳುತ್ತೇವೆ. ಪ್ರೇರಣಾತ್ಮಕ ಕತೆಗಳು, ಜನಪದ ಕತೆಗಳು, ಸಕಾರಾತ್ಮಕ ಕತೆಗಳು, ಆತ್ಮಕತೆಗಳು, ಪ್ರವಾಸದ ಅನುಭವಗಳು - ಇವು ಖಂಡಿತವಾಗಿಯೂ ನಮಗೆ ಬದುಕಿನ ಬಗ್ಗೆ ಹೊಸ ಒಳನೋಟಗಳನ್ನು ನೀಡುತ್ತವೆ. ನಮ್ಮ ಅರಿವಿನ ದಿಗಂತವನ್ನು ವಿಸ್ತರಿಸುತ್ತವೆ.
ಸ್ಯಾಕ್ಸೋಫೋನ್ ಎಂದೊಡನೆ ಮನದಲ್ಲಿ ಮೂಡಿ ಬರುವ ಹೆಸರು ಕದ್ರಿ ಗೋಪಾಲನಾಥ್ ಅವರದು. ವಿದೇಶಿ ಮೂಲದ ವಾದ್ಯ ಸ್ಯಾಕ್ಸೋಫೋನಿನಿಂದ ನಮ್ಮ ದೇಶದ ಶಾಸ್ತ್ರೀಯ ಕರ್ನಾಟಕ ಸಂಗೀತ ಸುಶ್ರಾವ್ಯವಾಗಿ ಹೊರಹೊಮ್ಮುವಂತೆ ಮಾಡಿದ ಮಹಾ ಸಾಧನೆ ಅವರದು.
ಅವರೀಗ ೧೧ ಅಕ್ಟೋಬರ್ ೨೦೧೯ರಂದು ನಮ್ಮನ್ನಗಲಿ, ಮರಳಿ ಬಾರದ ಲೋಕಕ್ಕೆ ನಡೆದಿದ್ದಾರೆ. ಸ್ಯಾಕ್ಸೋಫೋನ್ ವಾದನದಿಂದ ಜಗತ್ತಿನಲ್ಲೆಲ್ಲ ಹೆಸರು ಗಳಿಸಿದ ಪದ್ಮಶ್ರೀ ಪುರಸ್ಕೃತ ಕದ್ರಿ ಗೋಪಾಲನಾಥರಿಗೆ ಇದೊಂದು ನುಡಿನಮನ.
ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ಸಜಿಪಮೂಡದಲ್ಲಿ ೬ ಡಿಸೆಂಬರ್ ೧೯೪೯ರಂದು ಕದ್ರಿ ಗೋಪಾಲನಾಥರ ಜನನ. ಅವರ ಪೂರ್ವಿಕರು ಮಂಗಳೂರಿನ ಕದ್ರಿಯವರು. ಹಾಗಾಗಿ ಅವರ ಹೆಸರಿನೊಂದಿಗೆ ಕದ್ರಿ ಸೇರಿಕೊಂಡಿತು.
ಗೋಪಾಲನಾಥರ ತಂದೆ ತನಿಯಪ್ಪನವರು ನಾಗಸ್ವರ ವಾದಕರು. ತಂದೆಯಿಂದ ನಾಗಸ್ವರ ವಾದನ ಕಲಿತಿದ್ದ ಗೋಪಾಲನಾಥರಿಗೆ ಬಾಲ್ಯದಿಂದಲೇ ಸಂಗೀತದಲ್ಲಿ ಆಸಕ್ತಿ. ಅದೊಮ್ಮೆ ಮೈಸೂರು ಅರಮನೆಯ ಬ್ಯಾಂಡ್ ಸೆಟ್ನಲ್ಲಿ ಸ್ಯಾಕ್ಸೋಫೋನ್ ವಾದನ ಕೇಳಿದ ಗೋಪಾಲನಾಥರು ಆ ವಾದ್ಯಕ್ಕೆ ಮನಸೋತರು. ಆಗಲೇ ಅವರಿಂದ ಅದರ ವಾದನ ಕಲಿಯುವ ಸಂಕಲ್ಪ.
೧೩ ಎಪ್ರಿಲ್ ೧೯೧೯ ನೆನಪಿದೆಯಾ? ಅದು ಶತಮಾನದ ಕರಾಳ ದಿನ. ಅದುವೇ ಪಂಜಾಬಿನ ಅಮೃತಸರದ ಜಲಿಯನ್ವಾಲಾ ಬಾಗ್ನಲ್ಲಿ ಕ್ರೂರ ರೌಲತ್ ಕಾಯಿದೆಯನ್ನು ಪ್ರತಿಭಟಿಸಲು ಸಭೆ ಸೇರಿದ್ದ ದೇಶಭಕ್ತ ಭಾರತೀಯರನ್ನು ರಾಕ್ಷಸಿ ಪ್ರವೃತ್ತಿಯ ಬ್ರಿಟಿಷ ಅಧಿಕಾರಿಯೊಬ್ಬ ರೈಫಲುಗಳಿಂದ ಗುಂಡುಗಳ ಸುರಿಮಳೆಗೈದು ಕಗ್ಗೊಲೆ ನಡೆಸಿದ ಕರಾಳ ದಿನ.
ಅದಾಗಿ ಒಂದು ಶತಮಾನವೇ ದಾಟಿದೆ. ಅಂದು ಬ್ರಿಟಿಷರ ಗುಂಡುಗಳಿಗೆ ಬಲಿಯಾದವರು ಸುಮಾರು ೧,೦೦೦ ನಿರಾಯುಧ ಜನರು ಮತ್ತು ತೀವ್ರವಾಗಿ ಗಾಯಾಳುಗಳಾದವರು ೧,೧೧೫ ಜನರು. ಅದನ್ನು ಪ್ರತಿಭಟಿಸಿ ದಿವಂಗತ ನಾನಕ್ ಸಿಂಗ್ ಎಂಬವರು ಬರೆದಿದ್ದ ಕವನ “ಖೂನಿ ವೈಶಾಖಿ”. ಆಗಿನ ತಲೆಮಾರಿನ ಸುಪ್ರಸಿದ್ಧ ಪಂಜಾಬಿ ಬರಹಗಾರ ನಾನಕ್ ಸಿಂಗ್.
ಗುರುಮುಖಿಯಲ್ಲಿ ಬರೆಯಲಾದ ಆ ದೀರ್ಘ ಕವನವನ್ನು ನಿಷೇಧಿಸಲಾಗಿತ್ತು. ಹಾಗಾಗಿ ದಶಕಗಳ ಕಾಲ ಅದು ನಾಪತ್ತೆಯಾಗಿತ್ತು. ಗಿಯಾನಿ ಜೈಲ್ ಸಿಂಗ್ ಅವರು ದಿ. ಇಂದಿರಾ ಗಾಂಧಿಯ ಕೇಂದ್ರ ಸಚಿವ ಸಂಪುಟದಲ್ಲಿ ಗೃಹ ಸಚಿವರಾಗಿದ್ದಾಗ, ಆ ಕವನದ ಪ್ರತಿಯನ್ನು ನಾನಕ್ ಸಿಂಗ್ ಅವರ ಕುಟುಂಬಕ್ಕೆ ಒದಗಿಸಿದ್ದರು.
ಆ ಚಾರಿತ್ರಿಕ ಕವನವನ್ನು ನಾನಕ್ ಸಿಂಗರ ಮೊಮ್ಮಗ ನವದೀಪ್ ಸುರಿ ಇಂಗ್ಲಿಷಿಗೆ ಭಾಷಾಂತರಿಸಿದ್ದಾರೆ. ನವದೀಪ್ ಸಿಂಗ್ ಯುನೈಟೆಡ್ ಅರಬ್ ಎಮಿರಾಟಿಸಿನಲ್ಲಿ (ಯು.ಎ.ಇ.) ಭಾರತೀಯ ರಾಯಭಾರಿಯಾಗಿದ್ದಾರೆ.
ಕೃಷಿಗೆ ಸಾಲ ಕೊಡುವುದು ರಿಸ್ಕ್ ಎಂಬುದು ೧೯೭೦ರ ದಶಕದ ತನಕ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಕೇಂದ್ರ ಸರಕಾರದ ಅಭಿಪ್ರಾಯವಾಗಿತ್ತು. ಈ ಅಭಿಪ್ರಾಯವನ್ನೇ ಬದಲಾಯಿಸಿ, ಎಲ್ಲ ಬ್ಯಾಂಕುಗಳೂ ಕೃಷಿಗೆ ಸಾಲ ಕೊಡುವಂತಾದ ಪರಿವರ್ತನೆಯಲ್ಲಿ ಮಹತ್ತರ ಪಾತ್ರ ವಹಿಸಿದವರು ಕೆ.ಎಂ. ಉಡುಪರು.
೨೭ ಜುಲಾಯಿ ೨೦೧೯ರಂದು ನಮ್ಮನ್ನು ಅಗಲಿದ ಕಾರ್ಕಡ ಮಂಜುನಾಥ ಉಡುಪರೊಂದಿಗೆ ೧೯೭೭-೭೮ರಲ್ಲಿ ಸುಮಾರು ಒಂದು ವರುಷ ನನ್ನ ಒಡನಾಟ. ಆಗಿನ ಕೆಲವು ನೆನಪುಗಳೊಂದಿಗೆ ಅವರಿಗೆ ನುಡಿನಮನ ಈ ಬರಹ.
ಬೆಂಗಳೂರಿನ ಹೆಬ್ಬಾಳದ ಕೃಷಿ ವಿಶ್ವವಿದ್ಯಾಲಯದಲ್ಲಿ ಜೂನ್ ೧೯೭೭ರಲ್ಲಿ ಕೃಷಿ ಪದವಿ ಪಡೆದು ಅಡ್ಡೂರಿಗೆ ಹಿಂತಿರುಗಿದ್ದೆ. ಸಿಂಡಿಕೇಟ್ ಕೃಷಿ ಪ್ರತಿಷ್ಠಾನದ ಸೂತ್ರಧಾರಿ ಕೆ.ಎಂ. ಉಡುಪರು ನನ್ನ ಕೆಲವು ಕನ್ನಡ ಬರಹಗಳನ್ನು ಗಮನಿಸಿದ್ದರು. “ಮಣಿಪಾಲಕ್ಕೆ ಬನ್ನಿ, ಫೌಂಡೇಷನಿನಲ್ಲಿ ಕೆಲಸ ಮಾಡಿ. ಫೌಂಡೇಷನಿನ ಮಾಸಪತ್ರಿಕೆ ಕೃಷಿಲೋಕವನ್ನು ಇನ್ನೂ ಚೆನ್ನಾಗಿ ಮಾಡಿ” ಎಂದು ಕರೆಸಿಕೊಂಡರು.
In the middle of August 2018, floods devastated the entire state of Kerala. The destruction caused by non-stop rains is presented by “Frontline” fortnightly dated 14 September 2018 as follows:
“With terrifying force and spread that Kerala had not seen in nearly a century, the skies opened up in August, unleashing torrential rain and causing floods that left no part of the State untouched. The highlands, midlands and coastal plains, the three geographic regions of the State, were all devastated.
Heavy bouts of rain battered all 14 districts from the beginning of the monsoon in June, and grew in intensity after July, triggering catastrophic floods a series of landslides and heart-wrenching scenes on the hills of the Western Ghats range, which runs along the entire length of the State.
(ಮೂಡಬಿದಿರೆಯ ಆಳ್ವಾಸ್ “ನುಡಿಸಿರಿ”ಯಲ್ಲಿ 2012ರಲ್ಲಿ ನೀಡಿದ ಉಪನ್ಯಾಸ)
ಇತ್ತೀಚೆಗೆ, ಅಕ್ಟೋಬರ್ ೬, ೨೦೧೨ರಂದು ಕರ್ನಾಟಕ ಬಂದ್ ಕಾರಣದಿಂದಾಗಿ ಜನಜೀವನ ಸ್ತಬ್ಧವಾಗಿತ್ತು. ಅಂದು ರಾಮನಗರದಲ್ಲಿದ್ದ ನನಗೆ ಸಂಜೆ ೭ ಗಂಟೆಯ ನಂತರವೇ ಬಸ್ಸೇರಿ ಬೆಂಗಳೂರಿಗೆ ಹೋಗಲು ಸಾಧ್ಯವಾಯಿತು. ಯಾಕೆಂದರೆ ಮುಂಜಾನೆಯಿಂದ ಯಾವೊಂದು ವಾಹನವೂ ರಾಮನಗರ-ಬೆಂಗಳೂರು ರಸ್ತೆಯಲ್ಲಿ ಓಡಾಡಲಿಲ್ಲ. ಅದು, ಕಾವೇರಿ ನದಿ ನೀರಿನ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ ಬಗೆ.
ಕನ್ನಡ ಭಾಷೆಯ ಆಧಾರದಿಂದ ಕನ್ನಡದ ಪ್ರದೇಶಗಳ ಏಕೀಕರಣಕ್ಕಾಗಿ ಕನ್ನಡಿಗರು ಐದಾರು ದಶಕಗಳ ಕಾಲ ಹೋರಾಡಬೇಕಾಯಿತು. ಆದರೆ ನವಂಬರ್ ೧, ೧೯೫೬ರಂದು ಕನ್ನಡನಾಡು ರೂಪುಗೊಂಡ ನಂತರವೂ ತಮ್ಮ ನೆಲವನ್ನು ಮತ್ತು ಜಲವನ್ನು ಕಾಪಾಡಿಕೊಳ್ಳಲಿಕ್ಕಾಗಿ ಕನ್ನಡಿಗರು ಹೋರಾಡುತ್ತಲೇ ಇರಬೇಕಾಗಿರುವುದು ಒಂದು ವಿಪರ್ಯಾಸ.
ಕನ್ನಡನಾಡಿನ ಜಲಹೋರಾಟಗಳ ಕಾರಣ ಹಾಗೂ ಬೆಳವಣಿಗೆಗಳನ್ನು ಗಮನಿಸೋಣ. ಕರ್ನಾಟಕದಲ್ಲಿವೆ ಅರುವತ್ತಕ್ಕೂ ಹೆಚ್ಚಿನ ನದಿಗಳು. ಇವುಗಳಲ್ಲಿ ಪ್ರಧಾನವಾಗಿ ವಿವಾದಕ್ಕೆ ಒಳಗಾಗಿರುವುದು ಕಾವೇರಿ ಮತ್ತು ಕೃಷ್ಣಾ ನದಿಗಳು.
