Ethics and the Profession of Valuation

By Addoor Krishna Rao
M.B.A. M.A., CAIIB, B.Sc.(Agri.), FIV

Ethics are about making choices that may not always feel good or seem like they benefit you, but are the “right” choices to make. In our childhood, our parents have taught us the “Golden Rules of Life”, like “Be honest”, “Always tell the truth”, “Don’t steal”, “Don’t hurt others”. As the years passed, we started making compromises. That was the beginning of the dilution of the concept of “ethics”. As a result, in personal lives most of the people try to live by the “Golden Rules”. But, many think that it is not related to professional or business side of the life. Therefore, it is necessary to be very clear about the concept of ethics in life.

1. Ethics in Life

ಶೀತ ಮತ್ತು ಕಫದ ಚಿಕಿತ್ಸೆಗೆ ಪರಿಣಾಮಕಾರಿಯಾದ ತುಳಸಿ, ಅಪಾಯಕಾರಿ ವಿಕಿರಣದ ಪರಿಣಾಮ ಶಮನಗೊಳಿಸುತ್ತದೆ ಎಂದು ಇತ್ತೀಚೆಗಗಿನ ಸಂಶೊಧನೆ ತೋರಿಸಿಕೊಟ್ಟಿದೆ.

ಡಿಆರ್-ಡಿಒ(ಡಿಫೆನ್ಸ್ ರೀಸರ್ಚ್ ಆಂಡ್ ಡೆವಲಪ್‍ಮೆಂಟ್ ಆರ್ಗನೈಸೇಷನ್)ದ ವಿಜ್ನಾನಿಗಳು ವಿಕಿರಣದ ಪರಿಣಾಮಗಳ ಚಿಕಿತ್ಸೆಗೆ ತುಳಸಿಯ ಔಷಧಿ ಸಿದ್ಧಪಡಿಸಿದ್ದಾರೆ. ವಿಜ್ನಾನಿಗಳ ಪ್ರಕಾರ, ತುಳಸಿಯ ಆಂಟಿ-ಆಕ್ಸಿಡೆಂಟ್ ಅಂಶವು ವಿಕಿರಣದಿಂದ ಹಾನಿಯಾದ ಜೀವಕೋಶಗಳನ್ನು ರಿಪೇರಿ ಮಾಡಬಲ್ಲುದು.

"ಈ ಬಗ್ಗೆ ಪ್ರಾಣಿಗಳ ಮೇಲೆ ನಡೆಸಿದ ಪ್ರಯೋಗಗಳ ಫಲಿತಾಂಶಗಳು ಪ್ರೋತ್ಸಾಹದಾಯಕ" ಎನ್ನುತ್ತಾರೆ ಡಿಆರ್-ಡಿಒದ ಚೀಫ್ ಕಂಟ್ರೋಲರ್ ಡಬ್ಲ್ಯು. ಸೆಲ್ವಮೂರ್ತಿ. ಪ್ರಾಣಿಗಳಿಗೆ ಬಳಸಿದ ಔಷಧಿಯನ್ನೇ ಮನುಷ್ಯರಿಗೂ ಬಳಸಬಹುದು.

ಈ ರೀತಿಯ ಚಿಕಿತ್ಸೆಗೆ ತುಳಸಿಯನ್ನು ಬಳಸಿದ್ದು ಇದೇ ಮೊದಲ ಬಾರಿ ಎಂದವರು ತಿಳಿಸಿದ್ದಾರೆ. ವಿಕಿರಣ ಸಂಬಂಧಿ ರೋಗಗಳ ಚಿಕಿತ್ಸೆಗೆ ಉಪಯೋಗಿಸುವ ರಾಸಾಯನಿಕಗಳು ಬಹಳ ವಿಷಕಾರಿ. ಈ ಸಸ್ಯಾಧಾರಿತ ಔಷಧಿಯು ವಿಕಿರಣ ಚಿಕಿತ್ಸೆಯ ವಿಧಾನವನ್ನೇ ಬದಲಾಯಿಸುತ್ತದೆ. ಯಾಕೆಂದರೆ, ಇವು ಸುರಕ್ಷಿತ ಎನ್ನುತ್ತಾರೆ ಸೆಲ್ವಮೂರ್ತಿ. ಈ ಸಂಶೊಧನೆಗೆ ತಗಲಿದ ವೆಚ್ಚ ರೂ.೭ ಕೋಟಿ

ಹದಿನೈದು ವರುಷಗಳ ಉದ್ದಕ್ಕೂ ಅಡ್ರಿಯನ್ ಪಿಂಟೋ ಗಮನಿಸುತ್ತಲೇ ಇದ್ದರು: ದೇಶದ ಉದ್ದಗಲದಲ್ಲಿ ಹರಡಿರುವ ದ್ರಾಕ್ಷಿಯ ವೈನ್ ತಯಾರಿಸುವ ಘಟಕಗಳು ಟನ್ನುಗಟ್ಟಲೆ ದ್ರಾಕ್ಷಿಕಸ ಉತ್ಪಾದಿಸುವುದನ್ನು. ಆಗೆಲ್ಲ ಅವರಿಗೊಂದೇ ಯೋಚನೆ: ಈ ಕಸದಿಂದ ಏನಾದರೂ ಉಪಯುಕ್ತ ವಸ್ತು ಉತ್ಪಾದಿಸಬಹುದೇ?
ಸ್ಪಿರಿಟ್ ಉತ್ಪಾದಕಾ ಘಟಕ “ಪೆರ್ನೊಡ್ ರಿಕಾರ್ಡ್ ಇಂಡಿಯಾ”ದಲ್ಲಿ ಹಿರಿಯ ಮೆನೇಜರ್ ಆಗಿದ್ದ ಪಿಂಟೋ ಈ ಬಗ್ಗೆ ಸಂಶೋಧನೆ ಆರಂಭಿಸಿದ್ದು ೨೦೧೨ರಲ್ಲಿ. ಅದೊಂದು ದಿನ ದ್ರಾಕ್ಷಿಕಸದ ನಾರಿನಿಂದ ಕಾಗದ ತಯಾರಿಸಬಹುದು ಎಂದು ಅವರಿಗೆ ಹೊಳೆಯಿತು. ಒಂದು ಬ್ಲೆಂಡರ್ ಮತ್ತು ಬಲೆ ಬಳಸಿ, ತನ್ನ ಅಡುಗೆಕೋಣೆಯಲ್ಲಿ ದ್ರಾಕ್ಷಿಕಸದಿಂದ ಕಾಗದ ತಯಾರಿಸುವ ಪ್ರಯೋಗಕ್ಕಿಳಿದರು. ಮೊದಲ ಯತ್ನದಲ್ಲೇ ಯಶಸ್ಸು. “ಆ ಕಾಗದದ ಬಣ್ಣ ಮತ್ತು ರಚನೆ ಕಂಡು ಖುಷಿಯಾಯಿತು” ಎನ್ನುತ್ತಾರೆ ಪಿಂಟೋ.
ಅನಂತರ, ಈ ಕಿರುಉದ್ದಿಮೆ ಮುನ್ನಡೆಸಲಿಕ್ಕಾಗಿ ಅಹ್ಮದಾಬಾದಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಮೆನೇಜ್‍ಮೆಂಟಿನ ಒಂದು ಕೋರ್ಸಿಗೆ ಸೇರಿಕೊಂಡರು. ಹಾಗೆಯೇ ಮೇ ೨೦೧೬ರಲ್ಲಿ ಜಾಗತಿಕ ಬೌದ್ಧಿಕ ಸೊತ್ತಿನ ಸಂಸ್ಥೆಗೂ ಪೇಟೆಂಟಿಗಾಗಿ ಅರ್ಜಿ ಸಲ್ಲಿಕೆ; ದ್ರಾಕ್ಷಿಕಸದ ಕಾಗದ ಉತ್ಪಾದನೆಗಾಗಿ “ಗ್ರೀನ್ ಪೇಪರ್ ವರ್ಕ್ಸ್” ಸ್ಥಾಪನೆ.

ಹೂವಿನ ಬದಲಾಗಿ ಸಸಿಯನ್ನೇ ಉಡುಗೊರೆಯಾಗಿ ಕೊಟ್ಟರೆ ಹೇಗೆ? ಇದೊಳ್ಳೇ ಐಡಿಯಾ. ಯಾಕೆಂದರೆ, ಸಂಜೆಯ ಹೊತ್ತಿಗೆ ಬಾಡುವ ಹೂ ಕಸವಾಗಿ ಕಳೆದು ಹೋಗುತ್ತದೆ. ಆದರೆ ನೀವು ಕೊಟ್ಟ ಸಸಿ ಬೆಳೆದು ಗಿಡವಾಗಿ, ಹಸುರು ಹಬ್ಬಿಸಿ, ಪಡೆದಾತನ ಬದುಕಿನುದ್ದಕ್ಕೂ ಹೂ ಅರಳಿಸಬಹುದು, ಅಲ್ಲವೇ?
ಈ ಐಡಿಯಾ ಈಗ ಹಲವರನ್ನು ಸೆಳೆದಿದೆ. ಇತ್ತೀಚೆಗೆ ಮುಂಬೈಯ ವಾಹನ ಉತ್ಪಾದಕ ಕಂಪೆನಿಯೊಂದು ೫,೦೦೦ ಹೂ ಬಿಡುವ ಕುಂಡಸಸಿಗಳನ್ನು ಖರೀದಿಸಿತು – ತನ್ನ ವಾಣಿಜ್ಯ ಉತ್ಸವಕ್ಕೆ ಭೇಟಿ ನೀಡುವ ಅತಿಥಿಗಳಿಗೆ ಉಡುಗೊರೆ ನೀಡಲಿಕ್ಕಾಗಿ. ಹಾಗೆಯೇ, ಬೆಂಗಳೂರಿನ ಕಂಪೆನಿಯೊಂದು ತನ್ನ ೩೦೦ ಗ್ರಾಹಕರಿಗೆ ಮತ್ತು ಚೆನ್ನೈಯ ಕುಟುಂಬವೊಂದು ಮದುವೆಗೆ ಆಗಮಿಸಿದ್ದ ಸುಮಾರು ೧೦೦ ಕುಟುಂಬಗಳಿಗೆ ಉಡುಗೊರೆಯಾಗಿ ಹಂಚಿದ್ದು ಕುಂಡಸಿಸಿಗಳನ್ನು.

ಸಸ್ಯಗಳನ್ನು ರೋಗ ಹಾಗೂ ಕೀಟಗಳಿಂದ ರಕ್ಷಿಸಲಿಕ್ಕಾಗಿ ಬಳಸುವ ಪೀಡೆನಾಶಕಗಳು ಮನುಷ್ಯರಿಗೆ ಮಾರಕವಾಗುತ್ತವೆ ಎಂಬುದಕ್ಕೆ ಹಲವು ನಿದರ್ಶನಗಳಿವೆ. ಉದಾಹರಣೆಗೆ ಎಂಡೋಸಲ್ಫಾನ್. ಆದರೆ, ಈ ಪೀಡೆನಾಶಕಗಳು ಸಸ್ಯಗಳಿಗೂ ಮಾರಕವಾಗುತ್ತವೆ ಎಂದೀಗ ಸ್ಪಷ್ಟವಾಗಿದೆ.
ಈ ಪೀಡೆನಾಶಕಗಳು ಸಸ್ಯಗಳಲ್ಲಿ ಕೆಲವು ರಾಸಾಯನಿಕಗಳು ಉತ್ಪಾದನೆಯಾಗಲು ಕಾರಣವಾಗುತ್ತವೆ. ಈ ರಾಸಾಯನಿಕಗಳು ಸಸ್ಯಗಳ ಪ್ರೊಟೀನುಗಳು, ಲಿಪಿಡುಗಳು, ಶರ್ಕರಪಿಷ್ಟಗಳು ಮತ್ತು ಡಿಎನ್ಎಗಳಿಗೂ ಹಾನಿ ಮಾಡುತ್ತವೆ ಎಂದು ತಿಳಿದು ಬಂದಿದೆ. ಇಮಿಡಾ ಕ್ಲೊಪ್ರಿಡ್ ಎಂಬ ಪೀಡೆನಾಶಕವು ಅಫಿಡುಗಳು ಮತ್ತು ಮಿಡತೆಗಳನ್ನು ಕೊಲ್ಲುತ್ತದೆ. ಆದರೆ ಅದು ಭತ್ತದ ಸಸಿಗಳು ಕಂದುಜಿಗಿಹುಳುವಿನ ದಾಳಿಗೆ ಸುಲಭವಾಗಿ ಬಲಿಯಾಗುವಂತೆ ಮಾಡುತ್ತದೆ.
ಪೀಡೆನಾಶಕಗಳ ಇಂತಹ ವಿಷಕಾರಿ ಪರಿಣಾಮಗಳನ್ನು ಕಡಿಮೆ ಮಾಡಬಲ್ಲ ನೈಸರ್ಗಿಕ ರಾಸಯನಿಕಗಳನ್ನು ವಿಜ್ನಾನಿಗಳು ಹುಡುಕುತ್ತಲೇ ಇದ್ದಾರೆ. ಅಮೃತಸರದ ಗುರು ನಾನಕ ದೇವ ವಿಶ್ವವಿದ್ಯಾಲಯದ ಸಂಶೋಧನಾ ತಂಡಕ್ಕೆ ಈ ಹುಡುಕಾಟದಲ್ಲಿ ಯಶಸ್ಸು ಸಿಕ್ಕಿದೆ. ಅದು ಎಪಿಬ್ರಾಸ್ಸಿನೊಲೈಡ್ (ಇಬಿಎಲ್) ಎಂಬ ಸಸ್ಯಮೂಲದ ಹಾರ್-ಮೋನನ್ನು (ಪ್ರಚೋದಕವನ್ನು) ಗುರುತಿಸಿದೆ. ಭತ್ತದ ಬೀಜಗಳನ್ನು ಕ್ಲೊರ್ ಪೈರಿಫೊಸ್ (ಕ್ಲೊರಿನ್-ಯುಕ್ತ ಪೀಡೆನಾಶಕ) ಇದರ ವಿಷಕಾರಿ ಪರಿಣಾಮಗಳಿಂದ ಇಬಿಎಲ್ ರಕ್ಷಿಸಬಲ್ಲದು.

ನಗರಗಳ ಹೊರವಲಯಗಳ ಬಹುಪಾಲು ರೈತರು ತರಕಾರಿ ಬೆಳೆಯಲಿಕ್ಕಾಗಿ ಕೊಳಚೆ ನೀರನ್ನು ಬಳಸುತ್ತಾರೆ. ಆ ಪ್ರದೇಶಗಳಲ್ಲಿ ಏರೊಸೋಲಿನಂತಹ ವಾಯು ಮಾಲಿನ್ಯಕಾರಕಗಳು ಜಾಸ್ತಿ. ಈ ಎರಡು ಕಾರಣಗಳಿಂದಾಗಿ ಅವರು ಬೆಳೆಯುವ ತರಕಾರಿ ವಿಷಮಯವಾಗಿರುತ್ತದೆ.

ಬನಾರಸ್ ಹಿಂದೂ ವಿಶ್ವವಿದ್ಯಾಲಯ ನಡೆಸಿದ ಸಂಶೋಧನೆಯಿಂದ ಇದೀಗ ತಿಳಿದು ಬಂದ ವಿಷಯ: ಅಂತಹ ಸ್ಥಳದಲ್ಲಿ ಬೆಳೆದ ತರಕಾರಿಗಳಲ್ಲಿ ಭಾರಲೋಹಗಳ ಪ್ರಮಾಣ ಜಾಸ್ತಿ ಇರುತ್ತದೆ. ಇದು ಆಹಾರ ಕಲಬೆರಕೆ ನಿಷೇಧ ಕಾಯಿದೆಯಲ್ಲಿ ಸೂಚಿಸಿದ "ಸಹನೀಯ ಮಟ್ಟ"ಕ್ಕಿಂತಲೂ ಅಧಿಕ.

ರಾಡಿಷ್, ಸ್ಪಿನಾಚ್ ಮತ್ತು ಟೊಮೆಟೊಗಳನ್ನು ಮಣ್ಣಿನ ಕುಂಡಗಳಲ್ಲಿ ಸಂಶೋಧಕರು ಬೆಳೆಸಿದರು. ಅವುಗಳಿಗೆ ನೀಡಿದ್ದು ಕೊಳಚೆನೀರು ಮತ್ತು ಏರೊಸೋಲ್. ಈ ಕುಂಡಗಳನ್ನು ಇರಿಸಿದ್ದು ಮೂರು ಸ್ಥಳಗಳಲ್ಲಿ: ತಡಿಯ ಎಂಬ ಗ್ರಾಮೀಣ ಸ್ಥಳದಲ್ಲಿ, ಕಂಟೋನ್ಮೆಂಟ್ ಜಾಗದಲ್ಲಿ ಮತ್ತು ವಾರಣಾಸಿಯಲ್ಲಿ ವಿಶ್ವವಿದ್ಯಾಲಯದ ಸನಿಹದ ಹೆದ್ದಾರಿ ಹತ್ತಿರದಲ್ಲಿ. ಸಂಶೋಧನೆಯಲ್ಲಿ ಹೋಲಿಕೆಗಾಗಿ (ಕಂಟ್ರೋಲ್) ಬಳಸಿದ್ದು ವಿಶ್ವವಿದ್ಯಾಲಯದಲ್ಲಿ ಇರಿಸಿದ ಶುದ್ಧನೀರು ಎರೆದ ಕುಂಡಗಳನ್ನು.

ರಸಗುಲ್ಲಾ ಚಪ್ಪರಿಸಿದವರಿಗೇ ಗೊತ್ತು ಅದರ ಮಜಾ: ಬಾಯೊಳಗೆ ಹಾಕಿದೊಡನೆ ನಾಲಗೆಯ ಕಣಕಣವೂ ಜುಮ್ಮೆನಿಸುವ ಅನುಭವ.
ಇಂತಹ ರಸಗುಲ್ಲಾದ ಭೌಗೋಳಿಕ ಸೂಚಕದ ಹಕ್ಕುಸಾಧನೆ ಬಗ್ಗೆ ಈಗ ಎದ್ದಿದೆ ಗುಲ್ಲು. ಯಾಕೆಂದರೆ, ಇದರ ಭೌಗೋಳಿಕ ಸೂಚಕ (ಜಿಯಾಗ್ರಾಫಿಕಲ್ ಇಂಡಿಕೇಷನ್: ಜಿಐ) ನೀಡಬೇಕೆಂಬ ಅರ್ಜಿ ಬಂದಿರುವುದು ಒಡಿಶಾ (ಒರಿಸ್ಸಾ) ರಾಜ್ಯದಿಂದ. ದೇಶದ ಉದ್ದಗಲದಲ್ಲಿರುವ ಬಂಗಾಳಿ ಸಿಹಿತಿಂಡಿಗಳ ಅಂಗಡಿಗಳಿಂದ ರಸಗುಲ್ಲಾ ಖರೀದಿಸಿದವರೆಲ್ಲ “ಇದು ಬಂಗಾಳಿ ಸಿಹಿತಿಂಡಿ” ಎಂದು ನಂಬಿದ್ದರು.
ಆದರೆ ಆ ಗ್ರಹಿಕೆ ಸರಿಯಲ್ಲ. ರಸಗುಲ್ಲಾದ ತವರು ಬಂಗಾಳದ ಪಕ್ಕದ ಒಡಿಶಾ ರಾಜ್ಯದ ಭುವನೇಶ್ವರ ಮತ್ತು ಕಟಕ್ ನಗರಗಳ ನಡುವಿನ ಹೆದ್ದಾರಿಯ ಪಕ್ಕದ ಪುಟ್ಟ ಹಳ್ಳಿ ಪಹಲಾ. ಅಲ್ಲಿ ಅದರ ಹೆಸರು ಖೀರ್ ಮೋಹನಾ; ಅದನ್ನು ಪುರಿಯ ಜಗನ್ನಾಥ ದೇವರಿಗೆ ನೈವೇದ್ಯವಾಗಿ ೧೮ನೆಯ ಶತಮಾನದಿಂದಲೇ ಅರ್ಪಿಸಲಾಗುತ್ತಿದೆ. ಅಂದರೆ, ಕೊಲ್ಕತಾದ ನೊಬಿನ್ ಚಂದ್ರದಾಸ್ ರಸಗುಲ್ಲಾವನ್ನು ತಯಾರಿಸಿ ಮಾರಾಟ ಮಾಡತೊಡಗುವ ಒಂದು ಶತಮಾನ ಮುಂಚೆಯೇ ಒಡಿಶಾದಲ್ಲಿ ರಸಗುಲ್ಲಾ ಜನಪ್ರಿಯವಾಗಿತ್ತು.
ಒಡಿಶಾ ರಾಜ್ಯದ ಅತಿಸಣ್ಣ ಮತ್ತು ಮಧ್ಯಮ (ಗಾತ್ರದ) ಉದ್ದಿಮೆಗಳ ಇಲಾಖೆಯು ರಸಗುಲ್ಲಾದ ಹಕ್ಕುಸಾಧನೆ ಮಾಡಲು ಮುಂದಡಿ ಇಟ್ಟಾಗ ಇದೆಲ್ಲ ಗುಲ್ಲು ಶುರು. ಅನಂತರ ಮಾಧ್ಯಮ, ಪತ್ರಿಕೆ, ವೆಬ್ಸೈಟುಗಳಲ್ಲಿ ಹಾಗೂ ಟ್ವಿಟರಿನಲ್ಲಿ ಇಲಾಖೆಯ ಪರ ಹಾಗೂ ವಿರೋಧ ಅಭಿಪ್ರಾಯಗಳ ಸಾಲುಸಾಲು.

ಕೆನ್ನೀಲಿ ಚಹಾ ಉತ್ಪಾದನೆಯಲ್ಲಿ ಅಸ್ಸಾಂ ಜಗತ್ತಿನಲ್ಲಿ ಎರಡನೇ ಸ್ಥಾನ ಪಡೆಯಲಿದೆ (ಮೊದಲನೇ ಸ್ಥಾನ ಕೆನ್ಯಾ ದೇಶಕ್ಕೆ).
ಚಹಾ ಪರಿಣತರ ಪ್ರಕಾರ, ಕೆನ್ನೀಲಿ ಚಹಾದ ಆರೋಗ್ಯ ಲಾಭಗಳು ಹಲವು. ಇದು ಕಣ್ಣಿನ ದೃಷ್ಟಿ, ದೇಹದ ಕೊಲೆಸ್ಟರಾಲ್ ಮಟ್ಟ, ರಕ್ತದ ಸಕ್ಕರೆಯಂಶ – ಇವನ್ನು ಸುಧಾರಿಸುತ್ತದೆ. ಇದರಲ್ಲಿರುವ ಆಂಟಿ-ಆಕ್ಸಿಡೆಂಟುಗಳಿಂದಾಗಿ ಕ್ಯಾನ್ಸರ್ ನಿರೋಧ ಪರಿಣಾಮ ಬೀರುತ್ತದೆ. ಆದ್ದರಿಂದಲೇ ಇದಕ್ಕೆ “ಭವಿಷ್ಯದ ಚಹಾ” ಎಂಬ ಹೆಸರು ಬಂದಿದೆ.
“ಕೆನ್ನೀಲಿ ಚಹಾದಲ್ಲಿ ಅಂತೋಸಯಾನಿನುಗಳು ಸಮೃದ್ಧವಾಗಿವೆ. ಈ ಚಹಾ ಗಿಡದ ಎಲೆಗಳ ಕೆನ್ನೀಲಿ ಬಣ್ಣಕ್ಕೆ ಇವು ಕಾರಣ. ಕಪ್ಪು ಚಹಾ ಮತ್ತು ಹಸುರು ಚಹಾದ ಕೆಫೇನ್ ಪ್ರಮಾಣಕ್ಕೆ ಹೋಲಿಸಿದಾಗ ಕೆನ್ನೀಲಿ ಚಹಾದಲ್ಲಿ ಕೆಫೇನ್ ಕಡಿಮೆ” ಎನ್ನುತ್ತಾರೆ ಪ್ರದೀಪ್ ಬರುವಾ, ಹಿರಿಯ ಸಲಹಾಧಿಕಾರಿ, ಟೊಕ್ಲೈ ಚಹಾ ಸಂಶೋಧನಾ ಸಂಸ್ಥೆ (ದೇಶದ ಅತ್ಯಂತ ಹಳೆಯ ಚಹಾ ಸಂಶೋಧನಾ ಸಂಸ್ಥೆ).
ಜಗತ್ತಿನ ಲಕ್ಷಾಂತರ ಚಹಾಪ್ರಿಯರಿಗೆ ನೂತನ ಪೇಯ ಈ ಕೆನ್ನೀಲಿ ಚಹಾ. ಇದರಿಂದ ಕಪ್ಪು ಚಹಾ ಮತ್ತು ಹಸುರು ಚಹಾ ತಯಾರಿಸಬಹುದು. ಅವಲ್ಲದೆ, ಕಟೆಚಿನುಗಳು, ಅಂತೋಸಯಾನಿನುಗಳು, ಅಂತೋಸಯಾನಿಡಿನಿನ್ಗಳ ಭಟ್ಟಿ ಇಳಿಸಬಹುದು (ಪೂರಕ ಔಷಧಿಗಳಾಗಿ ಅಥವಾ ಆಹಾರರಕ್ಷಕಗಳಾಗಿ ಇವುಗಳ ಬಳಕೆ.) ಇದರಿಂದ ಪಡೆಯಬಹುದಾದ ಪೊಲಿಫಿನೊಲಿಗೆ ಔಷಧಿ ತಯಾರಿಕೆ ಮತ್ತು ಕೈಗಾರಿಕೆಗಳಲ್ಲಿ ಬೇಡಿಕೆ.

ಭೂಮಿಯ ಬಿಸಿಯೇರಿಕೆಯಿಂದ ಸಾಗರಜೀವಿಗಳ ಮೇಲೆ ಅಗಾಧ ಪರಿಣಾಮಗಳಾಗುತ್ತಿವೆ ಎಂದು ಬಹುದೇಶಗಳ ವಿಜ್ನಾನಿಗಳ ತಂಡ ಪತ್ತೆ ಮಾಡಿದೆ. ಆಸ್ಟ್ರೇಲಿಯಾ, ಬ್ರಿಟನ್, ಯುಎಸ್ಎ, ಡೆನ್ಮಾರ್ಕ್, ಸ್ಪೇಯ್ನ್ ಮತ್ತು ಕೆನಡಾ ದೇಶಗಳ ವಿಜ್ನಾನಿಗಳು ಇದರ ಸದಸ್ಯರು.
ಈ ತಂಡವು ಭೂಮಿಯ ಎಲ್ಲ ಸಾಗರಗಳಲ್ಲಿ ಸಂಶೋಧನೆ ನಡೆಸಿತು; ಆಸ್ಟ್ರೇಲಿಯಾದ ಪೂರ್ವ ಮತ್ತು ದಕ್ಷಿಣದ ಸಾಗರ ತೀರಗಳು, ಯುಎಸ್ಎ ದೇಶದ ಪೂರ್ವ ಮತ್ತು ಪಶ್ಚಿಮ ಸಾಗರ ತೀರಗಳು, ಯುರೋಪಿನ ಪಶ್ಚಿಮದ ಅಟ್ಲಾಂಟಿಕ್ ಸಾಗರ ಮತ್ತು ಮೆಡಿಟರೇನಿಯನ್ ಸಮುದ್ರಗಳಲ್ಲಿ ವಿಶೇಷ ಅಧ್ಯಯನ ಕೈಗೊಂಡಿತು.
ಈ ಸಾಗರಗಳಲ್ಲಿರುವ ಎಲ್ಲ ಜೀವಿಗಳಿಗೆ ಆಹಾರ ಒದಗಿಸುವುದು ಫೈಟೋಪ್ಲಾಂಕ್ಟನ್ ಎಂಬ ಸಸ್ಯಗಳು. ಭೂಮಿಯ ಮೇಲಣ ಸಸ್ಯಗಳಿಗೆ ಹೋಲಿಸಿದಾಗ, ಇವು ಈಗ ಸರಾಸರಿಯಾಗಿ ಆರು ದಿನ ಮುಂಚೆ ಅರಳುತ್ತಿವೆ. ಹಾಗೆಯೇ, ಹಂಗಾಮಿನಲ್ಲಿ ಮೀನಿನ ಮರಿಗಳು ಹನ್ನೊಂದು ದಿನ ಮುಂಚೆ ಮೊಟ್ಟೆಯೊಡೆದು ಹೊರಬರುತ್ತಿವೆ.
ಮೀನುಗಳು, ಷೆಲ್ ಮೀನುಗಳು, ಪ್ಲಾಂಕ್ಟನ್, ಕ್ರಸ್ಟೇಷಿಯನುಗಳು, ಮ್ಯಾನ್-ಗ್ರೂವುಗಳು, ಸಮುದ್ರಹುಲ್ಲುಗಳು ಇತ್ಯಾದಿ ಸಾಗರಜೀವಿಗಳು ತಮ್ಮ ನೆಲೆಯನ್ನು ಬದಲಾಯಿಸುತ್ತಿವೆ – ಭೂಮಿಯ ಪ್ರತಿಯೊಂದು ಡಿಗ್ರಿ ಸೆಲ್ಷಿಯಸ್ ಬಿಸಿಯೇರುವಿಕೆಗೆ ಪ್ರತಿಕ್ರಿಯೆಯಾಗಿ ಪ್ರತಿಯೊಂದು ದಶಕದಲ್ಲಿ ಸರಾಸರಿ ೭೨ ಕಿಮೀ ದೂರಕ್ಕೆ ತಮ್ಮ ನೆಲೆ ಬದಲಾಯಿಸುತ್ತಿವೆ.

ಕೆಲವು ಚಿಟ್ಟೆಗಳು ಒಣಎಲೆಯಂತೆ ಕಾಣುವಂತಾದದ್ದು ಹೇಗೆ? ಈ ಪ್ರಶ್ನೆಗೆ ಉತ್ತರ ನೀಡಬಲ್ಲ ಸಂಶೋಧನಾ ಫಲಿತಾಂಶ ವರದಿಯಾಗಿದೆ.
ಕಲ್ಲಿಮಾ ವರ್ಗಕ್ಕೆ ಸೇರಿದ ಚಿಟ್ಟೆಗಳ ಮುಚ್ಚಿದ ರೆಕ್ಕೆಗಳು ಥೇಟ್ ಒಣಎಲೆಯಂತಿವೆ – ರೆಕ್ಕೆಗಳ ಮೇಲಣ ನರ ಹಾಗೂ ಪುಟ್ಟಪುಟ್ಟ ಬೂಷ್ಟು ಬಿಂದುಗಳ ಸಹಿತ. ಈ ವಿಸ್ಮಯ ಹೇಗಾಯಿತು ಎಂಬುದು ಪರಿಣತರನ್ನು ಕಾಡುತ್ತಿರುವ ಪ್ರಶ್ನೆ.
ವಿಜ್ನಾನಿ ಆಲ್ಫ್ರೆಡ್ ರಸೆಲ್ ವಾಲ್ಲೇಸ್ ಆಗ್ನೇಯ ಏಷ್ಯಾದಿಂದ ಕಲ್ಲಿಮಾ ಚಿಟ್ಟೆಗಳನ್ನು ಸಂಗ್ರಹಿಸಿದ್ದು ಸುಮಾರು ೨೦೦ ವರುಷಗಳ ಮುಂಚೆ. ಹಸಿದ ಹಕ್ಕಿಗಳಿಂದ ಪಾರಾಗಲಿಕ್ಕಾಗಿ ಕಾಲಕ್ರಮೇಣ ಈ ಚಿಟ್ಟೆಗಳು ತಮ್ಮ ಮುಚ್ಚಿದ ರೆಕ್ಕೆಗಳ ಸ್ವರೂಪವನ್ನು ಒಣಎಲೆಯಂತೆ ಬದಲಾಯಿಸಿಕೊಂಡವು ಎಂಬ ವಾದ ಮಂಡಿಸಿದವರು ಅವರು. ಆ ಮೂಲಕ ಡಾರ್ವಿನ್ನರ ಪ್ರಾಕೃತಿಕ ಆಯ್ಕೆಯ ಸಿದ್ಧಾಂತವನ್ನು ಬಲಪಡಿಸಿದರು.
ಆದರೆ ಇತರ ಕೆಲವು ವಿಜ್ನಾನಿಗಳು ಈ ವಿಕಾಸಕ್ಕೆ ಬೇರೆ ವಿವರಣೆ ನೀಡಿದರು. ಉದಾಹರಣೆಗೆ ಯುಎಸ್ಎ ದೇಶದ ವಿಜ್ನಾನಿ ರಿಚರ್ಡ್ ಗೋಲ್ಡ್ ಸ್ಮಿತ್ ೧೯೪೦ರಲ್ಲಿ ನೀಡಿದ ವಿವರಣೆ. ಅವರ ಪ್ರಕಾರ, ಆ ಚಿಟ್ಟೆಗಳ ರೆಕ್ಕೆಗಳು ಹಂತಹಂತವಾಗಿ ಬದಲಾಗಿ ಒಣಎಲೆಯಂತೆ ಆಗಲಿಲ್ಲ. ಬದಲಾಗಿ ಒಂದೇಟಿಗೆ ಒಣಎಲೆಯಂತೆ ಬದಲಾದವು.

Pages