M. S. Subbulakshmi, Great Karnatak Musician, India

೯೯.ಭಾರತೀಯ ಸಂಗೀತ - ಶತಮಾನಗಳ ಸಾಂಸ್ಕೃತಿಕ ಸಂಪತ್ತು
ಐದು ಸಾವಿರ ವರುಷಗಳ ಪರಂಪರೆ ಇರುವ ಭಾರತೀಯ ಸಂಗೀತವು ಇಲ್ಲಿನ ಭೌಗೋಲಿಕ ವಿಸ್ತಾರ ಮತ್ತು ಸಾಂಸ್ಕೃತಿಕ ವೈವಿಧ್ಯತೆಯಿಂದಾಗಿ ಈ ದೇಶದ ಬೆಲೆ ಕಟ್ಟಲಾಗದ ಸಾಂಸ್ಕೃತಿಕ ಸಂಪತ್ತಾಗಿದೆ.

ಭಾರತದ ಸಂಗೀತ ಸಾಮ್ರಾಜ್ಯದ ಎರಡು ಪ್ರಧಾನ ಕವಲುಗಳು: ದಕ್ಷಿಣ ಭಾರತ ಮೂಲದ ಕರ್ನಾಟಕ ಸಂಗಿತ ಮತ್ತು ಉತ್ತರ ಭಾರತ ಮೂಲದ ಹಿಂದುಸ್ಥಾನಿ ಸಂಗೀತ.

ಭಾರತೀಯ ಸಂಗೀತದ ಶುದ್ಧ ಸ್ವರಗಳು: ಸ, ರಿ, ಗ, ಮ, ಪ, ದ, ನಿ. ಈ ಸಪ್ತಸ್ವರಗಳೇ “ರಾಗ"ಗಳ ಬುನಾದಿ. ಈ ಸ್ವರಗಳ ವಿಭಿನ್ನ ರೂಪಗಳು ಅವನ್ನು “ಕೋಮಲ" ಅಥವಾ “ತೀವ್ರ" ಸ್ವರಗಳಾಗಿ ಬದಲಾಯಿಸುತ್ತವೆ. ಆದರೆ. "ಸ" ಮತ್ತು "ಪ" ಯಾವತ್ತೂ ಶುದ್ಧ ಸ್ವರಗಳಾಗಿರುತ್ತವೆ. ಆದ್ದರಿಂದ ಅವೆರಡಕ್ಕೆ “ಅಚಲ ಸ್ವರ”ಗಳೆಂಬ ಹೆಸರು; ಉಳಿದ ಐದು ಸ್ವರಗಳಿಗೆ “ಚಲ ಸ್ವರ”ಗಳೆಂಬ ಹೆಸರು.

Warli painting by Jivya Soma Mashe, Thane, India

೯೮.ಭಾರತೀಯ ಚಿತ್ರಕಲೆ - ವಿವಿಧತೆಯಲ್ಲಿ ಏಕತೆ ಸಾರುವ ಸಾಂಸ್ಕೃತಿಕ ಸಂಪತ್ತು
             
ಸೂಕ್ಷ್ಮತೆ ಮತ್ತು ವಿವಿಧತೆಗೆ ಹೆಸರಾದ ಭಾರತೀಯ ಚಿತ್ರಕಲೆಗೆ ಸಾವಿರಾರು ವರುಷಗಳ ಇತಿಹಾಸವಿದೆ. ಹಲವಾರು ಸ್ಥಳಗಳಲ್ಲಿ ಪ್ರಾಚೀನ ಜನರು ಗವಿಗಳಲ್ಲಿ ಬರೆದ ಚಿತ್ರಗಳನ್ನು ಪತ್ತೆ ಮಾಡಲಾಗಿದೆ. ಭಾರತದ ಅತ್ಯಂತ ಪುರಾತನ ಚಿತ್ರಗಳು ಮಧ್ಯಪ್ರದೇಶದ ವಿಂಧ್ಯಾ ಪರ್ವತ ಶ್ರೇಣಿಯ ಭೀಮ್ ಬೇಟ್ಕಾದಲ್ಲಿ ಪತ್ತೆಯಾಗಿವೆ. ಇವು ೧೦,೦೦೦ ವರುಷ ಹಳೆಯ ಚಿತ್ರಗಳೆಂದು ಅಂದಾಜಿಸಲಾಗಿದೆ. ಇವುಗಳಲ್ಲಿ ಮನುಷ್ಯರು, ಪ್ರಾಣಿಗಳು ಮತ್ತು ಬೇಟೆಯ ಚಿತ್ರಗಳನ್ನು ಕಾಣಬಹುದು.

ಪ್ರಾಚೀನ ಭಾರತೀಯ ಚಿತ್ರಗಳಿಗೆ ರಾಮಾಯಣ, ಮಹಾಭಾರತದ ಪ್ರಸಂಗಗಳೂ, ಪುರಾಣದ ಕತೆಗಳೂ ಸ್ಫೂರ್ತಿ ಎಂಬುದನ್ನು ಕಾಣಬಹುದು. ಜೊತೆಗೆ, ಭಾರತೀಯ ಚಿತ್ರಕಲೆಯಲ್ಲಿ ಹಿಂದೂ, ಬೌದ್ಧ ಮತ್ತು ಜೈನ ಧರ್ಮಗಳ ಗಾಢ ಪ್ರಭಾವವನ್ನು ಗುರುತಿಸಬಹುದು.

೧೯ನೇ ಶತಮಾನದಿಂದ ಭಾರತದಲ್ಲಿ ಆಧುನಿಕ ಚಿತ್ರಕಲೆಯ ಬೆಳವಣಿಗೆಯನ್ನು ಗುರುತಿಸಬಹುದು. ೨೦ನೇ ಶತಮಾನದ ಭಾರತದ ಚಿತ್ರಕಾರರಲ್ಲಿ ಕೇರಳದ ರಾಜಾ ರವಿವರ್ಮ ಅವರನ್ನು ಉಲ್ಲೇಖಿಸಲೇ ಬೇಕು. ಅವರು ಚಿತ್ರಿಸಿದ ಅದ್ಭುತ ಚಿತ್ರಗಳು ಇಂದಿಗೂ ಭಾರತದಲ್ಲಿ ಭಾರೀ ಜನಪ್ರಿಯ.

ಭಾರತೀಯ ಚಿತ್ರಕಲೆಯಲ್ಲಿ ಮುಖ್ಯವಾಗಿ ಹತ್ತು ಶೈಲಿಗಳನ್ನು ಗುರುತಿಸಲಾಗಿದೆ.

Atal Tunnel, Himachal Pradesh, India

೯೭.ಅಟಲ್ ಸುರಂಗ ಮಾರ್ಗ
ಜಗತ್ತಿನ ಅತ್ಯಂತ ಉದ್ದದ (೧೦,೦೦೦ ಅಡಿಗಳಿಗಿಂತ ಎತ್ತರ ಪ್ರದೇಶದ) ಅಟಲ್ ಸುರಂಗ ಮಾರ್ಗವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ೩.೧೦.೨೦೨೦ರಂದು ಉದ್ಘಾಟಿಸಿದರು. ಇದರ ಉದ್ದ ೯.೦೨ ಕಿಮೀ ಮತ್ತು ನಿರ್ಮಾಣ ವೆಚ್ಚ ರೂ.೩,೨೦೦ ಕೋಟಿ.

ಭಾರತದ ಮಾಜಿ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ನೆನಪಿಗಾಗಿ ಇದನ್ನು ಅಟಲ್ ಸುರಂಗ ಮಾರ್ಗವೆಂದು ಹೆಸರಿಸಲಾಗಿದೆ. ಅವರು ೩.೬.೨೦೦೦ದಂದು ಈ ಬೃಹತ್ ಸುರಂಗ ಮಾರ್ಗ ನಿರ್ಮಾಣದ ಯೋಜನೆಯನ್ನು ಘೋಷಿಸಿದ್ದರು.

ಈ ಸುರಂಗ ಹಿಮಾಚಲ ಪ್ರದೇಶದ ರೊಹ್‌ಟಾಂಗ್ ಪಾಸ್‌ನಲ್ಲಿ ನೆಲದಡಿಯಲ್ಲಿದೆ. ಹಿಮಾಚಲ ಪ್ರದೇಶದ ಮನಾಲಿಯಿಂದ ಲಡಕ್‌ನ ಲೆಹ್ ಸಂಪರ್ಕಿಸುವ ಈ ಸುರಂಗದಿಂದಾಗಿ, ಪ್ರಯಾಣ ದೂರ ೪೬ ಕಿಮೀ ಮತ್ತು ಪ್ರಯಾಣ ಸಮಯ ೪-೫ ಗಂಟೆ ಕಡಿಮೆಯಾಗಿದೆ. ಮುಖ್ಯವಾಗಿ, ನಮ್ಮ ಸೈನ್ಯ ತುರ್ತು ಸಂದರ್ಭದಲ್ಲಿ ಲಡಕ್ ತಲಪಲು ಇದರಿಂದಾಗಿ ಬಹಳ ಅನುಕೂಲ. ಅಲ್ಲಿನ ಪ್ರವಾಸೋದ್ಯಮಕ್ಕೆ ಇದರಿಂದಾಗಿ ಹೊಸ ಚೈತನ್ಯ ಒದಗಿದೆ.

Statue of Unity in Narmada District, Gujarat, India

೯೬.ಏಕತಾ ಪ್ರತಿಮೆ - ಸರ್ದಾರ ವಲ್ಲಭಬಾಯ್ ಪಟೇಲರ ಸ್ಮಾರಕ
ಸರ್ದಾರ ವಲ್ಲಭಬಾಯ್ ಪಟೇಲರ ಸ್ಮಾರಕವಾಗಿ ನಿರ್ಮಿಸಲಾಗಿರುವ ಈ ಪ್ರತಿಮೆ ಗುಜರಾತಿನ ನರ್ಮದಾ ಜಿಲ್ಲೆಯ ನರ್ಮದಾ ಕಣಿವೆಯಲ್ಲಿದೆ (ಬರೋಡಾದಿಂದ ೧೦೦ ಕಿಮೀ ದೂರದಲ್ಲಿ). ೧೮೨ ಮೀ. (೫೯೭ ಅಡಿ) ಎತ್ತರದ ಇದು ಜಗತ್ತಿನ ಅತ್ಯಂತ ಎತ್ತರದ ಪ್ರತಿಮೆ. ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಇದನ್ನು ೩೧.೧೦.೨೦೧೮ರಂದು ರಾಷ್ಟ್ರಕ್ಕೆ ಸಮರ್ಪಿಸಿದರು.

ಇದರ ಶಿಲ್ಪಿ ಭಾರತದ ರಾಮ್ ವಿ. ಸುತಾರ್. ಲಾರೆನ್ಸ್ ಆಂಡ್ ಟ್ಯುಬ್ರೋ ಕಂಪೆನಿ ಉಕ್ಕು ಮತ್ತು ಕಾಂಕ್ರೀಟಿನಿಂದ ನಿರ್ಮಿಸಿದ ಈ ಬೃಹತ್ ಪ್ರತಿಮೆಗೆ ಕಂಚಿನ ಲೇಪ ನೀಡಲಾಗಿದೆ. ೩೧.೧೦.೨೦೧೩ರಂದು ಶುರುವಾದ ಇದರ ನಿರ್ಮಾಣ ೩೦.೧೦.೨೦೧೮ರಂದು ಮುಕ್ತಾಯವಾಯಿತು. ಸರ್ದಾರ ವಲ್ಲಭಬಾಯ್ ಪಟೇಲ್ ರಾಷ್ಟ್ರೀಯ ಏಕತಾ ಟ್ರಸ್ಟ್ ಇದರ ನಿರ್ಮಾಣದ ಜವಾಬ್ದಾರಿ ನಿರ್ವಹಿಸಿತು. ಈ ಪ್ರತಿಮೆಯ ನಿರ್ಮಾಣಕ್ಕೆ ತಗಲಿದ ವೆಚ್ಚ ರೂ.೨,೯೮೯ ಕೋಟಿ.

ಭಾರತ ಸರಕಾರದ ಪ್ರಪ್ರಥಮ ಉಪಪ್ರಧಾನಿಯೂ, ಗೃಹ ಸಚಿವರೂ ಆದ ಸರ್ದಾರ್ ವಲ್ಲಭಬಾಯ್ ಪಟೇಲರು ೫೬೨ ಸಂಸ್ಥಾನಗಳನ್ನು ಭಾರತ ದೇಶಕ್ಕೆ ಸೇರಿಸಿಕೊಳ್ಳುವುದರಲ್ಲಿ ಪ್ರಧಾನ ಪಾತ್ರ ವಹಿಸಿದವರು. ಅಂತಹ ಧೀಮಂತ ರಾಷ್ಟ್ರ ನಾಯಕರ ಸ್ಮರಣೆಗೆ ಮೀಸಲು ಜಗತ್ತಿನ ಅತ್ಯಂತ ಎತ್ತರದ ಈ ಪ್ರತಿಮೆ. (ಫೋಟೋ)

Vivekananda Rock Memorial & Saint Thiruvalluvar Statue, India

೯೫.ಸ್ವಾಮಿ ವಿವೇಕಾನಂದ ಸ್ಮಾರಕ, ಕನ್ಯಾಕುಮಾರಿ
ಭಾರತದ ದಕ್ಷಿಣ ತುದಿಯ ಕನ್ಯಾಕುಮಾರಿಯ ವಾವತುರೈಯಲ್ಲಿ ಸ್ವಾಮಿ ವಿವೇಕಾನಂದರ ಸ್ಮಾರಕವನ್ನು ೧೯೭೦ರಲ್ಲಿ ನಿರ್ಮಿಸಲಾಯಿತು. ಇದು ಅರಬಿ ಸಮುದ್ರ, ಹಿಂದೂ ಮಹಾಸಾಗರ ಮತ್ತು ಬಂಗಾಳ ಕೊಲ್ಲಿ ಒಟ್ಟುಗೂಡುವ ಅಮೋಘ ಸ್ಥಳ. ಇಲ್ಲಿ, ಸಾಗರದ ನಡುವೆ ಇರುವ ಶಿಲೆಯಲ್ಲಿ ಸ್ವಾಮಿ ವಿವೇಕಾನಂದರ ತಪಸ್ಸು ಮಾಡಿದ್ದರೆಂದು ಪ್ರತೀತಿ. ಇದೀಗ, ಸಾವಿರಾರು ಪ್ರವಾಸಿಗಳನ್ನು ಆಕರ್ಷಿಸುವ ಸ್ಮಾರಕ.

ಸ್ಥಳ ಪುರಾಣದ ಅನುಸಾರ, ಇದು ಶಿವನನ್ನು ಸ್ತುತಿಸುತ್ತಾ ದೇವಿ ಕುಮಾರಿ ತಪಸ್ಸು ಮಾಡಿದ ಜಾಗ. ಇಲ್ಲಿನ ಬೃಹತ್ ಶಿಲೆಯಲ್ಲಿ ಎರಡು ಮುಖ್ಯ ಕಟ್ಟಡಗಳಿವೆ: ವಿವೇಕಾನಂದ ಮಂಟಪ ಮತ್ತು ಶ್ರೀಪಾದ ಮಂಟಪ. ಯುವಜನರ ವ್ಯಕ್ತಿತ್ವ ವಿಕಸನ ಮತ್ತು ರಾಷ್ಟ್ರಪ್ರಗತಿಯ ಪ್ರಧಾನ ಉದ್ದೇಶಗಳ ಸಾಧನೆಗೆ ಮುಡಿಪಾಗಿರುವ “ವಿವೇಕಾನಂದ ಕೇಂದ್ರ”ವೂ ಇಲ್ಲಿದೆ. ಜೊತೆಗೆ ಸ್ವಾಮಿ ವಿವೇಕಾನಂದರ ಬೃಹತ್ ಪ್ರತಿಮೆಯನ್ನು ಇಲ್ಲಿ ಸ್ಥಾಪಿಸಲಾಗಿದೆ.

Art Pieces from Waste at Rock Garden, Chandigarh, India

೯೪.ಚಂಡಿಘರ್ ರಾಕ್ ಗಾರ್ಡನ್ - ಕಸದಿಂದ ಕಲೆ
“ಕಸದಿಂದ ಕಲೆ" ಎಂಬುದಕ್ಕೆ ಅದ್ಭುತ ನಿದರ್ಶನ ಚಂಡಿಘರ್ ರಾಕ್ ಗಾರ್ಡನ್. ಇದರ ಸ್ಥಾಪಕರು ನೆಕ್ ಚಂದ್ ಸಾಹ್ನಿ. ೧೯೫೭ರಲ್ಲಿ ಅವರು ಕಂಡ ಕನಸೊಂದು ಕೆಲವೇ ವರುಷಗಳಲ್ಲಿ ಅಪೂರ್ವ ಉದ್ಯಾನವಾಗಿ ಅರಳಿತು. ಇದೀಗ ೪೦ ಎಕರೆಯಲ್ಲಿ ವ್ಯಾಪಿಸಿ, ಪ್ರತಿ ವರುಷ ಲಕ್ಷಗಟ್ಟಲೆ ಪ್ರವಾಸಿಗಳನ್ನು ಸ್ವಾಗತಿಸುತ್ತಿದೆ. ಇಲ್ಲಿರುವ ಪ್ರತಿಯೊಂದು ಕಲಾಕೃತಿಯೂ ಕೈಗಾರಿಕೆಗಳ ಅಥವಾ ಮನೆಗಳ ತ್ಯಾಜ್ಯ ವಸ್ತುಗಳಿಂದಲೇ ರೂಪಿಸಲ್ಪಟ್ಟಿದೆ ಎಂಬುದೇ ಇದರ ವಿಶೇಷ.

ಕಸವಾಗಿ ಎಸೆದ ಬಾಟಲಿಗಳು; ಗಾಜಿನ ಚೂರುಗಳು; ಬಳೆಗಳ, ನೆಲಕ್ಕೆ ಹಾಸುವ ಟೈಲುಗಳ, ಸೆರಾಮಿಕ್ ಕುಂಡಗಳ, ಸಿಂಕುಗಳ, ಪೈಪುಗಳ ತುಂಡುಗಳು; ವಿದ್ಯುತ್ ಉಪಕರಣಗಳ ಭಾಗಗಳು - ಎಲ್ಲೆಲ್ಲೋ ಕಸವಾಗಿ ಬಿದ್ದಿರಬೇಕಾಗಿದ್ದ ಈ ತ್ಯಾಜ್ಯ ವಸ್ತುಗಳು ಇಲ್ಲಿ ಚಂದವಾಗಿ ಜೋಡಿಸಲ್ಪಟ್ಟು, ಮನಮೋಹಕ ಕಲಾಕೃತಿಗಳಾಗಿ ಎದ್ದು ನಿಂತಿವೆ. ಉದ್ಯಾನದೊಳಗೆ ಸುತ್ತಿಸುತ್ತಿ ಸಾಗುವ ಕಾಲುಹಾದಿಗಳ ಅಕ್ಕಪಕ್ಕದಲ್ಲಿ ಈ ಕಲಾಕೃತಿಗಳನ್ನು ಆಕರ್ಷಕವಾಗಿ ಜೋಡಿಸಲಾಗಿದೆ. ಅಲ್ಲಲ್ಲಿ ನಿರ್ಮಿಸಿರುವ ಪುಟ್ಟ ಜಲಪಾತಗಳು, ಆಯಾ ಸ್ಥಳಗಳಿಗೆ ಪ್ರಾಕೃತಿಕ ಸೊಬಗು ಒದಗಿಸಿವೆ.

ರಾಕ್ ಗಾರ್ಡನಿನಲ್ಲಿ ಒಂದು ಗೊಂಬೆಗಳ ಸಂಗ್ರಹಾಲಯವೂ ಇದೆ. ನೆಕ್ ಚಂದ್ ಹರಿದ ಬಟ್ಟೆ ಚೂರುಗಳಿಂದ ೧೯೭೦ರಲ್ಲಿ ರಚಿಸಿದ್ದ ೨೦೦ ಗೊಂಬೆಗಳನ್ನು ಅಲ್ಲಿ ರಕ್ಷಿಸಿಡಲಾಗಿದೆ.

T. B, Solabakkanavar - Founder of Utsav Rock Garden, Karnataka

೯೩.ಕಲಾಕೃತಿಗಳ ಮಾಯಾಲೋಕ: ಉತ್ಸವ್ ರಾಕ್ ಗಾರ್ಡನ್
ಉತ್ಸವ್ ರಾಕ್ ಗಾರ್ಡನ್ - ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ಗೊಟಗೋಡಿ ಗ್ರಾಮದಲ್ಲಿ ಪುಣೆ - ಬೆಂಗಳೂರು ಹೆದ್ದಾರಿಯ ಪಕ್ಕದಲ್ಲಿರುವ ಶೈಕ್ಷಣಿಕ ಸಾಂಸ್ಕೃತಿಕ ಪ್ರವಾಸಿ ಕೇಂದ್ರ. ಅಲ್ಲಿ ಎತ್ತಕಂಡರತ್ತ ಆಳೆತ್ತರದ ಮಣ್ಣಿನ ಶಿಲ್ಪಗಳು. ಹಳ್ಳಿ ಬದುಕಿನ ಕಾಯಕಗಳು, ಬೇಸಾಯದ ಕೆಲಸಗಳು, ವಿವಿಧ ಗುಡಿಕೈಗಾರಿಕೆಗಳು, ಹತ್ತಾರು ಜಾನಪದ ಕಲಾಭಂಗಿಗಳು - ಇವೆಲ್ಲದರಲ್ಲಿ ನಿರತರಾಗಿರುವ ವ್ಯಕ್ತಿಗಳ ಶಿಲ್ಪಗಳು. ಪ್ರತಿಯೊಂದು ಶಿಲ್ಪವೂ ಜೀವಂತ ಎನಿಸುವಂತಿದೆ!

Hampi Virupaaksha Temple, Karnataka, India

೯೨.ಹಂಪಿ - ವಿಜಯನಗರ ಸಾಮ್ರಾಜ್ಯದ ರಾಜಧಾನಿ
ಪ್ರಾಚೀನ ಭಾರತದ ಆರ್ಥಿಕ ಮತ್ತು ಸಾಂಸ್ಕೃತಿಕ ಸಂಪತ್ತು ಹಾಗೂ ಜನಪರ ಆಡಳಿತದ ಸಾರ್ವಕಾಲಿಕ ಸಾಕ್ಷಿ ಕರ್ನಾಟಕದ ಹಂಪಿ. ಇದೀಗ ಜಗತ್ಪ್ರಸಿದ್ಧ ಯುನೆಸ್ಕೋ ಪಾರಂಪರಿಕ ತಾಣ. ಬೆಂಗಳೂರಿನಿಂದ ೩೭೬ ಕಿಮೀ ಮತ್ತು ಹುಬ್ಬಳ್ಳಿಯಿಂದ ೧೬೫ ಕಿಮೀ ದೂರದಲ್ಲಿದೆ.

ಈಗ ಕರ್ನಾಟಕದ ವಿಜಯನಗರ ಜಿಲ್ಲೆಯಲ್ಲಿರುವ ಹಂಪಿ, ೧೪ನೆಯ ಶತಮಾನದಲ್ಲಿ ಸಮೃದ್ಧ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಪರ್ಷಿಯನ್ ಮತ್ತು ಯುರೋಪಿಯನ್ (ಮುಖ್ಯವಾಗಿ ಪೋರ್ಚುಗೀಸ್) ಪ್ರವಾಸಿಗಳು ಬರೆದಿರುವ ಪ್ರವಾಸ ಕಥನಗಳ ಅನುಸಾರ, ಇದು ಸಂಪತ್ತು ತುಂಬಿ ತುಳುಕುತ್ತಿದ್ದ ಮಹಾನಗರವಾಗಿತ್ತು. ಪರ್ಷಿಯಾ ಮತ್ತು ಪೋರ್ಚುಗಲ್ ವರ್ತಕರನ್ನು ಆಕರ್ಷಿಸುತ್ತಿದ್ದ ಹಂಪಿ, ಆಗ ಬಹುಶಃ ಭಾರತದ ಅತ್ಯಂತ ಸಂಪದ್ಭರಿತ ನಗರವಾಗಿತ್ತು. ಕ್ರಿ.ಶ. ೧೫೦೦ರಲ್ಲಿ ಚೀನಾದ ಬೀಜಿಂಗಿನ ನಂತರ, ಜಗತ್ತಿನ ೨ನೇ ಅತ್ಯಂತ ದೊಡ್ಡ ನಗರವಾಗಿ ರಾರಾಜಿಸುತ್ತಿತ್ತು.

ಆದರೆ, ೧೫೬೫ರಲ್ಲಿ ಕೆಲವು ಮುಸ್ಲಿಂ ಸುಲ್ತಾನರ ಸಂಯುಕ್ತ ಸೈನ್ಯವು ವಿಜಯನಗರ ಸೈನ್ಯವನ್ನು ಯುದ್ಧದಲ್ಲಿ ಸೋಲಿಸಿ, ರಾಜಧಾನು ಹಂಪಿಗೆ ನುಗ್ಗಿ, ಅಲ್ಲಿನ ಮನೆಮಠಗಳನ್ನು ಲೂಟಿ ಮಾಡಿತು; ಅಲ್ಲಿನ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕೇಂದ್ರಗಳನ್ನು ಹಾಳುಗೆಡವಿತು. ಅನಂತರ ಪಾಳುಬಿದ್ದ ಊರಾಯಿತು ಹಂಪಿ.

Belur Chennakeshava Temple, Karnataka, India

೯೧.ಜಗತ್ತಿನ ಶ್ರೇಷ್ಠ ಶಿಲ್ಪಕಲೆಯ ಬೀಡು: ಬೇಲೂರು - ಹಳೆಬೀಡು
ಕರ್ನಾಟಕದ ಹಾಸನ ಜಿಲ್ಲೆಯ ಬೇಲೂರಿನ ಶ್ರೀ ಚೆನ್ನಕೇಶವ ದೇವಾಲಯವು ಜಗತ್ತಿನಲ್ಲೇ ಶ್ರೇಷ್ಠ ಶಿಲ್ಪಕಲೆಯ ನೆಲೆ ಎಂಬುದು ಎಲ್ಲರೂ ತಲೆದೂಗಬೇಕಾದ ಸಂಗತಿ. ೧೨ನೆಯ ಶತಮಾನದ ಈ ಹಿಂದೂ ದೇವಾಲಯವನ್ನು ಕ್ರಿ.ಶ. ೧೧೧೭ರಲ್ಲಿ ಯಗಚಿ ನದಿ ದಡದಲ್ಲಿ ನಿರ್ಮಿಸಲು ಆರಂಭಿಸಿದವನು ಹೊಯ್ಸಳ ರಾಜ ವಿಷ್ಣುವರ್ಧನ. ಆಗ ವೇಲಾಪುರವೆಂದು ಕರೆಯಲಾಗುತ್ತಿದ್ದ ಇದು ಹೊಯ್ಸಳ ಸಾಮ್ರಾಜ್ಯದ ರಾಜಧಾನಿಯಾಗಿತ್ತು.

ಈ ಅತ್ಯದ್ಭುತ ಶಿಲಾಸೌಂದರ್ಯದ ದೇವಾಲಯದ ನಿರ್ಮಾಣವನ್ನು ೧೦೩ ವರುಷಗಳ ಅವಧಿಯಲ್ಲಿ ರಾಜಮನೆತನದ ಮೂರು ತಲೆಮಾರುಗಳು ಪೂರೈಸಿದವು. ಇದಕ್ಕೆ ಮುಸ್ಲಿಂ ವೈರಿಸೈನ್ಯಗಳು ಯುದ್ಧದ ಸಂದರ್ಭಗಳಲ್ಲಿ ಮತ್ತೆಮತ್ತೆ ಹಾನಿ ಮಾಡಿದವು. ಆದರೆ, ಹೊಯ್ಸಳ ರಾಜರು ಛಲದಿಂದ ಪುನರ್ ನಿರ್ಮಾಣ ಮಾಡಿದರು. (ಫೋಟೋ)

ಬೆಂಗಳೂರಿನಿಂದ ೨೦೦ ಕಿಮೀ ಮತ್ತು ಹಾಸನದಿಂದ ೩೫ ಕಿಮೀ ದೂರದಲ್ಲಿರುವ ಬೇಲೂರು ವೈಷ್ಣವರ ಯಾತ್ರಾಸ್ಥಳ. ಮಹಾಭಾರತ, ರಾಮಾಯಣ ಮತ್ತು ಪುರಾಣಗಳ ಹಲವು ಸಂಗತಿಗಳನ್ನು ಇಲ್ಲಿನ ಅನೇಕ ಕೆತ್ತನೆಗಳು ಬಿಂಬಿಸುತ್ತವೆ.

Jog Falls in Karnataka, India

೯೦.ವಿಶ್ವವಿಖ್ಯಾತ ಜೋಗ ಜಲಪಾತ
ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಜೋಗ ಜಲಪಾತ ವಿಶ್ವವಿಖ್ಯಾತ. ೮೩೦ ಅಡಿ (೨೫೩ ಮೀ) ಎತ್ತರದಿಂದ, ರಾಜ, ರೋರರ್, ರಾಕೆಟ್ ಮತ್ತು ಲೇಡಿ ಎಂಬ ಹೆಸರಿನ ನಾಲ್ಕು ಧಾರೆಗಳಾಗಿ ಜೋಗದ ಗುಂಡಿಗೆ ಶರಾವತಿ ನದಿ ಧುಮುಕುವ ದೃಶ್ಯ ಅದ್ಭುತ. ಬೆಂಗಳೂರಿನಿಂದ ೩೩೫ ಕಿಮೀ ಮತ್ತು ಶಿವಮೊಗ್ಗದಿಂದ ೧೦೦ ಕಿಮೀ ದೂರದಲ್ಲಿದೆ ಜೋಗ.

ಅದೇನಿದ್ದರೂ, ಮಳೆಗಾಲದ ಜುಲೈ - ಆಗಸ್ಟ್ ತಿಂಗಳಲ್ಲಿ, ಲಿಂಗನಮಕ್ಕಿ ಜಲಾಶಯದಲ್ಲಿ ನೀರು ತುಂಬಿದಾಗ, ಅಣೆಕಟ್ಟಿನಿಂದ ನೀರು ಹೊರ ಹರಿಯಲು ಬಿಟ್ಟರೆ ಮಾತ್ರ ಜೋಗ ಜಲಪಾತ ನೋಡುವ ಭಾಗ್ಯ ನಮ್ಮದು. ಉಳಿದ ತಿಂಗಳುಗಳಲ್ಲಿ, ಅಣೆಕಟ್ಟಿನಿಂದ ನೀರು ಹೊರ ಬಿಡದಿದ್ದಾಗ, ಅಲ್ಲಿ ಕಾಣಿಸುವುದು ಕೇವಲ ಬೆಟ್ಟ. ಜೋಗದಲ್ಲಿ ಧುಮ್ಮಿಕ್ಕುವ ಶರಾವತಿ ನದಿ ಮುಂದಕ್ಕೆ ಹರಿದು, ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಅರಬಿ ಸಮುದ್ರ ಸೇರುತ್ತದೆ.

ಲಿಂಗನಮಕ್ಕಿ ಜಲಾಶಯದಿಂದಾಗಿ, ಮಹಾತ್ಮಾ ಗಾಂಧಿ ವಿದ್ಯುತ್ ಉತ್ಪಾದನಾ ಕೇಂದ್ರವು ೧೯೬೦ರಿಂದ ಕಾರ್ಯಾಚರಿಸುತ್ತಿದೆ (ಸಾಮರ್ಥ್ಯ ೧೨೦ ಮೆಗಾವಾಟ್).

Pages